ಜೆಡಿಎಸ್ ಮುಳುಗುವ ಹಡಗು ಎಂದ ಬಿಜೆಪಿಗೆ ರೇವಣ್ಣ ಟಾಂಗ್..!

suddionenews
1 Min Read

ಬೆಂಗಳೂರು: ರಾಜ್ಯ ಪ್ರವಾಸಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಮಾತನಾಡಿದ್ರು. ಜೆಡಿಎಸ್ ಮುಳುಗುವ ಹಡಗು ಎಂದಿದ್ರು. ಇದೀಗ ಆ ಮಾತಿಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಟಾಂಗ್ ಕೊಟ್ಟಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ಮುಳುಗುತ್ತಾರೆ ನೋಡೋಣಾ ಎಂದಿದ್ದಾರೆ.

ಅರುಣ್ ಸಿಂಗ್ ಬಗ್ಗೆ ಮಾತನಾಡಿದ ರೇವಣ್ಣ, ಮೊದಲು ಅರುಣ್ ಸಿಂಗ್ 2023ರ ವಿಧಾನಸಭಾ ಚುನಾವಣೆವರೆಗೆ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಮುಂದುವರೆಯಲಿ ಎಂದಿದ್ದಾರೆ. ಅವರನ್ನ ಮುಂದುವರೆಸಲೂ ಬೇಕಾದ್ರೆ ನಾವೇ ಕೇಸರಿ ಪಡೆಗೆ ಮನವಿ ಮಾಡ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಗೆ ಅಂತಹ ದುಸ್ಥಿತಿ ಬಂದಿಲ್ಲ. ನಾವೂ ಯಾವ ಪಕ್ಷಕ್ಕೂ ಅರ್ಜಿ ಹಾಕಿಲ್ಲ. ಹಡಗು ಮುಳುಗಿದ್ರು ಜೆಡಿಎಸ್ ಪಕ್ಷ ಮತ್ತೆ ಮೇಲಕ್ಕೆದ್ದು ಕೆಲಸ ಮಾಡುತ್ತೆ. ಅಧಿಕಾರದಲ್ಲಿದ್ದಾಗ ಯಾವ ಪಕ್ಷ ದ್ವೇಷದ ರಾಜಕಾರಣ ಮಾಡಿದ್ರು ಅನ್ನೋದನ್ನ ಎಳೆ ಎಳೆಯಾಗಿ ಸದನದಲ್ಲಿ ಹೇಳ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *