ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳಿಬಿಡ್ಲಿ : ಹೆಚ್ ಡಿ ರೇವಣ್ಣ ಗರಂ ಆಗಿದ್ದೇಕೆ..?

suddionenews
1 Min Read

ಹಾಸನ: ಬಿಜೆಪಿ ಸರ್ಕಾರದ ಮೇಲೆ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಆಕ್ರೋಶಭರಿತರಾಗಿದ್ದಾರೆ. ಶಿಕ್ಷಣದ ವಿಚಾರವಾಗಿ ಹಣ ಇಲ್ಲವೆಂದರೆ ಸರ್ಕಾರ ಪಾಪರ್ ಎಂದು ಘೋಷಣೆ ಮಾಡಿಕೊಳ್ಳಲಿ ಎಂದಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿಲ್ಲ. ಅವರಿಗೆ ಆಗದೆ ಹೋದರಿ ಹೇಳಲಿ, ನಾನೇ ಹಾಸ್ಟೇಲ್ ಮಾಡ್ತೇನೆ. ಕಟ್ಟಡವನ್ನ ಬಾಡಿಗೆ ತೆಗೆದುಕೊಂಡಾದರೂ ಮಕ್ಕಳಿಗೆ ಹಾಸ್ಟೇಲ್ ಮಾಡ್ತೇನೆ. ಸದ್ಯ ಯಾರು ಯಾರ ಮಾತು ಕೇಳಲ್ಲ ಬಿಜೆಪಿ ಸರ್ಕಾರದಲ್ಲಿ. ಸಿಎಂ ಕೊಟ್ಟ ಪತ್ರವನ್ನೇ ಕಸದ ಬುಟ್ಟಿಗೆ ಹಾಕ್ತಾರೆ ಎಂದು ಗರಂ ಆಗಿದ್ದಾರೆ.

ಇನ್ನು ಇದೇ ವೇಳೆ ಬೆಂಗಳೂರು ರಸ್ತೆ ಬಗ್ಗೆ ಮಾತನಾಡಿದ್ದು, ರಸ್ತೆ ಗುಂಡಿಯಿಂದ ಆ ಮೇಡಂ ಸತ್ರು. ಪಾಪ ಅವರ ಮನೆಯವರ ಕಷ್ಟ ನೋಡೋದಕ್ಕೆ ಆಗ್ತಿಲ್ಲ. ಇವತ್ತೆಲ್ಲಾ ಗುಂಡಿ ಮುಚ್ಚಿದ್ರೆ ನಾಳೆ ಮತ್ತೆ ಗುಂಡಿ ಬೀಳುತ್ತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *