ರಾಮನಗರದಿಂದ ನನ್ನನ್ನ ಖಾಲಿ ಮಾಡಿಸ್ತಾರಂತೆ : ಡಿಕೆ ಸಹೋದರರಿಗೆ ಕುಮಾರಸ್ವಾಮಿ ಟಾಂಗ್..!

suddionenews
1 Min Read

 

ರಾಮನಗರ: ಚನ್ನಪಟ್ಟಣದಲ್ಲಿ ಯುಜಿ ಕೇಬಲ್ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಡಿಕೆ ಸಹೋದರರ ಮೇಲೆ ಹರಿಹಾಯ್ದಿದ್ದಾರೆ.

ನಾನು ಯಾರನ್ನು ಟಾರ್ಗೆಟ್ ಮಾಡಲ್ಲ. ಅವರೇ ನನ್ನನ್ನ ಟಾರ್ಗೆಟ್ ಮಾಡ್ತಾ ಇರೋದು. ನನಗು ಅವರಿಗೂ ಯಾವುದೇ ಸಂಬಂಧವಿಲ್ಲ. ನನ್ನ ಪಾಡಿಗೆ ನಾನು ನನ್ನ ಕೆಲಸ ಮಾಡ್ತಾ ಇದ್ದೇನೆ. ಆದ್ರೆ ಜಿಲ್ಲೆಯಲ್ಲಿ ಇಷ್ಟು ದಿನ ಮಲಗಿದ್ದ ನಾಯಕರೆಲ್ಲ ಈಗ ಎದ್ದು ಕೆಲಸ ಮಾಡಲು ಶುರು ಮಾಡಿದ್ದಾರೆ.

ರಾಮನಗರಕ್ಕೂ ನನಗೂ ಇರಿವ ಸಂಬಂಧ ಏನು ಅಂತ ಸಾವಿರಾರು ಬಳಿ ಹೇಳಿದ್ದೇನೆ. ನನಗೂ ಈ ಜಿಲ್ಲೆಗೂ ತಾಯಿ ಮಗನಿಗಿರುವ ನಂಟಿದೆ. ರಾಮನಗರದಿಂದ ಕುಮಾರಸ್ವಾಮಿ ಯನ್ನ ಖಾಲಿ ಮಾಡಿಸಬೇಕು ಅಂತಾರೆ. ಅದು ಅಷ್ಟು ಸಾಧ್ಯವಾ..? ಹಣದ ಮೂಲಕ, ದಬ್ಬಾಳಿಕೆ ಮೂಲಕ ಕುಮಾರಸ್ವಾಮಿಯನ್ನ ಬಗ್ಗು ಬಡಿಯೋದಕ್ಕೆ ಇನ್ನು ಹತ್ತು ಜನ್ಮ ಎತ್ತಿ ಬರಬೇಕು. ಮೇಕೆದಾಟು ಪಾದಯಾತ್ರೆಯಿಂದ ಜೆಡಿಎಸ್ ಭದ್ರಕೋಟೆ ಛಿದ್ರವಾಗಿದೆ ಎಂದುಕೊಂಡಿದ್ದಾರೆ. ಇನ್ನು ಹತ್ತು ಪಾದಯಾತ್ರೆ ಬೇಕಾದರೂ ಮಾಡಿಕೊಳ್ಳಲಿ.‌ಈ ಜಿಲ್ಲೆಯ ಜನರ ಮನಸ್ಸು ಗೆಲ್ಲೋದು ಅಷ್ಟು ಸುಲಭ ಎಂದುಕೊಂಡು ಬಿಟ್ಟಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *