Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಂದು ನನಗೆ ಪುಷ್ಪಾರ್ಚನೆ ಮಾಡಿದವರೇ ನಂತರ ನನ್ನ ಮರೆತರು : ಮಾಜಿ ಸಿಎಂ ಕುಮಾರಸ್ವಾಮಿ ಬೇಸರ

Facebook
Twitter
Telegram
WhatsApp

 

ಬೆಂಗಳೂರು ನಗರದ ಅಭಿವೃದ್ಧಿ ಹೆಸರಿನಲ್ಲಿ ನಾಗರೀಕರ ತೆರಿಗೆ ಹಣ ಲೂಟಿ ಆಗ್ತಾ ಇದೆ. ಚಂಬಲ್ ಕಣಿವೆಯ ರೀತಿ ಹಣ ಲೂಟಿ ಆಗ್ತಾ ಇದೆ. ಜನರ ನೋವಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಈ ಕಾರ್ಯಕ್ರಮಿದೆ. ಜನತಾ ಮಿತ್ರ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡಲಾಗ್ತಿದೆ. 15 ವಾಹನಗಳಿಗೆ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

 

ನಗರದ ನಾಗರೀಕರಿಗೆ ಈ‌ ನಗರದ ಬೆಳವಣಿಗೆ ಹಾಗೂ ಇದಕ್ಕೆ ಕಾರಣ ಏನು ಕೊಡುಗೆ ಕೊಟ್ಟಿದ್ದಾರೆ ಅದನ್ನು ಹೇಳಲಾಗುತ್ತದೆ. ನಮಗೆ ಶಕ್ತಿ ಇಲ್ಲ ಅನ್ನೋದನ್ನ ಮೊದಲು ತೆಗೆದು ಹಾಕಿ. ಬೆಂಗಳೂರು ನಗರದ ನಾಗರೀಕರ ಮತ ಪಡೆಯಲು ನೀವು ನಾಯಕರಾಗಿ ಮೊದಲು. ಒಂದಿಷ್ಟು ಲೋಪಗಳು ನಿಮ್ಮಲ್ಲು ಇದೆ ಅನ್ಸುತ್ತೆ. ಹಾಗಾಗಿ ಮೊದಲು ಅದನ್ನು ತೆಗದು ಹಾಕಿ. ಒಂದೊಂದು ಕ್ಷೇತ್ರದ್ದು ವಿವರಣೆ ಕೊಡಬಲ್ಲೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ದಾಸರಹಳ್ಳಿಯಲ್ಲಿ ಕಾರ್ಯಕರ್ತರು ದುಡಿದಿದ್ದಾರೆ. ಒಂದು ಕಾಲದಲ್ಲಿ ನಮ್ಮ ಪಕ್ಷಕ್ಕೆ ಚಾಮರಾಜಪೇಟೆಲಿ ಮೂರು ಸಾವಿರ ಮತ ಇತ್ತು. ಆದರೆ ಒಂದು ಉಪ ಚುನಾವಣೆಯಲ್ಲಿ ದೇವೇಗೌಡರು ಸಭೆ ಮಾಡಿ‌ದ ನಂತರ ಕ್ಷೇತ್ರ ಗೆದ್ದರು. ಕುಮಾರಸ್ವಾಮಿ ಸಿಎಂ ಆಗೋದು ಮುಖ್ಯವಲ್ಲ. ದೈವ ಕೃಪೆಯಿಂದ 37 ಕ್ಷೇತ್ರದಲ್ಲಿ ಗೆದ್ದು ಎರಡು ಬಾರಿ ಸಿಎಂ ಆಗಿದ್ದೀನಿ. ಲೂಟಿಯನ್ನು ತಪ್ಪಿಸೋದಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು.

ನಮ್ಮ ಪಕ್ಷದ ಕಾರ್ಯಕರ್ತರು ಅಕ್ರಮವಾಗಿ ಬಂದವರಲ್ಲ. ಅಕ್ರಮವಾಗಿ ಹಣ ಮಾಡಿಲ್ಲ. ಬೆಂಗಳೂರು ನಗರದಲ್ಲಿ ಈ ಕಾರ್ಯಕ್ರಮ 16 ದಿನಗಳ ಕಾಲ ನಡೆಯಲಿದೆ. ಅದಕ್ಕೆ ನಿಮ್ಮ ದುಡುಮೆ ಮುಖ್ಯವಾಗಿದೆ. 1983-84 ರಲ್ಲಿ ನಗರದ ಕೆರೆ ಉಳಿಸಲು ಹೊರಟರು. ಬೆಂಗಳೂರು ನಗರ ಸಿಂಗಾಪೂರ್ ಮಾಡಲು ಹೊರಟವರು. ಬಡಾವಣೆ ರಚನೆ ಮಾಡ್ತೀವಿ ಅಂದವರು ಕೆರೆ ನಾಶ ಮಾಡಿದ್ರು. ಸಿಂಗಪೂರ್ ಮಾಡಲು ಹೊರಟವರು ಇದಕ್ಕೆ ಕಾರಣ.

ಧರ್ಮಸಿಂಗ್ ಕಾಲದಲ್ಲಿ ಮನೆಗಳಲ್ಲಿ ನೀರು ತುಂಬಿತ್ತು. ಅಂದು ನಾನು ಸಿಎಂ ಆದಾಗ ನಾನು ತೆಗದುಕೊಂಡ ನಿರ್ಧಾರ ಇಂದು ಎಷ್ಟು ಉಪಯೋಗ ಆಯ್ತು. ಇಂದಿಗೂ ನೀರು ತುಂಬುತ್ತಿಲ್ಲ ಅಲ್ಲಿ. ಅಂದು ನನಗೆ ಪುಷ್ಪಾರ್ಚನೆ ಮಾಡಿದ್ರು ಆದರೆ ನಂತರ ನನ್ನ ಮರೆತರು ಎಂದು ಬೇಸರ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

error: Content is protected !!