ಖಜಾನೆ ಇಲಾಖೆ ಉಪನಿರ್ದೇಶಕರಾಗಿ ಹೆಚ್.ಟಿ.ಅಶೋಕ ಅಧಿಕಾರ ಸ್ವೀಕಾರ

  ಚಿತ್ರದುರ್ಗ. ನ.07: ಚಿತ್ರದುರ್ಗ ಜಿಲ್ಲಾ ಖಜಾನೆ ಉಪನಿರ್ದೇಶಕರಾಗಿ ಹೆಚ್.ಟಿ.ಅಶೋಕ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಖಜಾನೆ ಉಪನಿರ್ದೇಶಕರ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದ ಸಹಾಯಕ ನಿರ್ದೇಶಕ ಎನ್.ಬೋರಯ್ಯ ಅವರು ಹೆಚ್.ಟಿ.ಅಶೋಕ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಖಜಾನೆಯ ಇಲಾಖೆಯ ಮುಖ್ಯಲೆಕ್ಕಿಗರಾದ ಅಶೋಕ್ ತುಂಬಿನಕಟ್ಟಿ, ಗಂಗಾಧರ್, ಪ್ರಭುಕುಮಾರ್, ನರಸಿಂಹಮೂರ್ತಿ, ಪ್ರಥಮ ದರ್ಜೆ ಸಹಾಯಕ ಅಶೋಕ್ ಸೇರಿದಂತೆ ಸಿಬ್ಬಂದಿಗಳು ಇದ್ದರು.