ಡಾ.ಈ. ಸತೀಶ್ ಅವರಿಗೆ ಪಿತೃ ವಿಯೋಗ

suddionenews
0 Min Read

ಚಿತ್ರದುರ್ಗ, (ಜೂ.08) : ಜಿಲ್ಲಾ ಅಸ್ಪತ್ರೆಯ ಖ್ಯಾತ ಹಾಗೂ ಹಿರಿಯ ವೈದ್ಯ ಡಾ.ಈ. ಸತೀಶ್ ಅವರ ತಂದೆ ನಿವೃತ್ತ ಅಬಕಾರಿ ಉಪ ಅಧೀಕ್ಷಕ ಹೆಚ್. ಈಶ್ವರಪ್ಪ (88) ವಯೋಸಹಜ ಅನಾರೋಗ್ಯದಿಂದ ಬುಧವಾರ ಮಧ್ಯಾನ್ಹ 3:40 ಕ್ಕೆ ನಿಧನರಾದರು.

ತಾಲ್ಲೂಕಿನ ಸಿಂಗಾಪುರ ಗ್ರಾಮದ ವಾಸಿಯಾಗಿದ್ದ ಇವರು ಪ್ರಸ್ತುತ ನಗರದ ಜೆಸಿಆರ್ ಬಡಾವಣೆಯ ಎರಡನೇ ಕ್ರಾಸ್ ನಲ್ಲಿ ವಾಸವಾಗಿದ್ದರು.

ಮೃತರಿಗೆ ಪುತ್ರರಾದ ಡಾ.ಸತೀಶ್ ಮತ್ತು ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆಯನ್ನು ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಹಿತಿಗಾಗಿ : ಮೊ.ಸಂಖ್ಯೆ : 93418 84548

Share This Article
Leave a Comment

Leave a Reply

Your email address will not be published. Required fields are marked *