Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಆತ ಕೈ ಮುಗಿದಿದ್ದು ವಿಗ್ರಹವನ್ನೇ ಎಸ್ಕೇಪ್ ಮಾಡೋಕೆ..!

Facebook
Twitter
Telegram
WhatsApp

 


ಬೆಳಗಾವಿ: ಇತ್ತೀಚೆಗೆ ಕಳ್ಳರು ದೇವರಿಗೂ ಹೆದರದೇ ದೇವರನ್ನೇ ಟಾರ್ಗೆಟ್ ಮಾಡ್ತಿರುವ ಘಟನೆಗಳು ನಡೆಯುತ್ತಿವೆ. ದೇವರ ಹುಂಡಿ ಕದ್ದರೆ ದೇವರ ಶಿಕ್ಷೆಗೆ ಗುರಿಯಾಗ್ತೀವೇನೋ ಎಂಬ ಭಯ ಕಳ್ಳರಲ್ಲಿತ್ತು. ಆದ್ರೆ ಅದೇಕೋ ಏನೋ ದೇವರನ್ನೇ ಎಸ್ಕೇಪ್ ಮಾಡುವ ಬುದ್ದಿ ಬಂದಿದೆ. ಈ ಹಿಂದೆ ಕೂಡ ದೇವರ ವಿಗ್ರಹದಲ್ಲಿದ್ದ ಮಾಂಗಲ್ಯವನ್ನ ಕದ್ದಿದ್ದನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಕಳ್ಳ ಅದಕ್ಕೂ ಒಂದೆಜ್ಜೆ ಮುಂದೆ ಹೋಗಿ ದೇವರನ್ನೇ ಎಸ್ಕೇಪ್ ಮಾಡಿ ಹೋಗಿದ್ದಾನೆ.

ಈ ಘಟನೆ ನಡೆದಿರೋದು ನಗರದ ಪಾಂಗೋಳ ಗಲ್ಲಿಯಲ್ಲಿ. ಈ ದೇವಾಸ್ಥಾನ ದೇಶದ ಏಕೈಕ ಅಶ್ವತ್ಥಾಮ ದೇವಾಲಯ ಎಂಬ ಖ್ಯಾತಿಗೆ ಒಳಗಾಗಿದೆ. ಈಗ ಆ ಕಳ್ಳ ಈ ದೇವಾಲಯದ ಮೂರ್ತಿಯನ್ನೇ ಕದ್ದು ಪರಾರಿಯಾಗಿದ್ದಾನೆ.

ದೇವರ ಮೂರ್ತಿ ಕದಿಯುವುದಕ್ಕೂ ಮುನ್ನ ಆತ ದೇವರಿಗೆ ಭಕ್ತಿಯಿಂದಲೇ ಕೈ ಮುಗಿದು ನಮಸ್ಕರಿಸಿದ್ದಾನೆ. ಆಗಲೇ ಬೇಡಿಕೊಂಡಿದ್ದನೋ ಏನೋ ನಿನ್ನನ್ನೇ ಕದಿಯುತ್ತಿದ್ದೇನೆ ಕ್ಷಮಿಸು ಅಂತ. ಕೈ ಮುಗುದ ಬಳಿಕ ಮೂರ್ತಿಯನ್ನೇ ಕಳ್ಳತನ ಮಾಡಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಟಿ ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ, ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ಮಾಡಿದ್ದಾರೆ. ಕಳ್ಳನನ್ನ ಹುಡುಕಲು ಆರಂಭಿಸಿದ್ದಾರೆ.

ಇನ್ನು ನಗರದಲ್ಲಿ ಈಗಾಗಲೇ ಸಾಕಷ್ಟು ಕಳ್ಳತನ ಪ್ರಕರಣಗಳು ದಾಖಲಾಗಿವೆ. ತಾಳಿ ಸರ, ಬೈಕ್ ಸೇರಿದಂತೆ ಅನೇಕ ವಸ್ತುಗಳು ಸರಣಿ‌ ಕಳ್ಳತನವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು

ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಪುತ್ರಿಯನ್ನೇ ಚಾಕುವಿನಿಂದ ಇರಿದು ಕೊಲೆ : ಬೆಚ್ಚಿ ಬಿದ್ದ ಹುಬ್ಬಳ್ಳಿ-ಧಾರವಾಡ ಮಂದಿ

ಹುಬ್ಬಳ್ಳಿ: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ನೇಹಾ ಬರ್ಬರವಾಗಿ ಕೊಲೆಯಾದ ಯುವತಿ. ಫಯಾಜ್ ಕೊಲೆ ಮಾಡಿದಾತ. ನೇಹಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಎಳಸು, ರಾಜಕೀಯ ಜ್ಞಾನ ಇರದವನು : ವಿಜಯೇಂದ್ರ ಮೇಲೆ ಈಶ್ವರಪ್ಪ ಮಾತಿನ ಪ್ರಹಾರ

ಉಡುಪಿ: ಹಾವೇರಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರಿಗೆ ಬಿಜೆಪಿ ನಿರಾಸೆ ಮಾಡಿದಾಗಿನಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಕ್ಕಳ ಮೇಲೆ ಹರಿಹಾಯುತ್ತಲೇ ಇದ್ದಾರೆ. ಬಿಜೆಪಿ ನಾಯಕರ ಮಾತನ್ನು ಮೀರಿ, ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ

error: Content is protected !!