Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗೋಪಾಲಯ್ಯ ಕೈಜಾರಿ.. ಅಶೋಕ್ ಕೈಗೆ ಬಂದ ಮಂಡ್ಯ ಉಸ್ತುವಾರಿ : ಸಿಎಂ ಈ ನಿರ್ಧಾರಕ್ಕೆ ಕಾರಣವೇನು..?

Facebook
Twitter
Telegram
WhatsApp

ಬೆಂಗಳೂರು: ಈ ಬಾರಿಯ ರಾಜಕೀಯ ಕಣ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ. ಇಷ್ಟು ದಿನ ಜೆಡಿಎಸ್ ಪ್ರಾಬಲ್ಯ ಇರುವಡೆಗೆ ಸೀರಿಯಸ್ ಆಗಿ ಕಣ್ಣು ಹಾಯಿಸದ ಬಿಜೆಪಿ ಈ ಬಾರಿ ಆ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಓಡಾಟ ಜೋರಾಗಿ ನಡೆಯುತ್ತಾ ಇದೆ.

ಹೇಳಿ ಕೇಳಿ ಹಳೆ ಮೈಸೂರು ಭಾಗ ಜೆಡಿಎಸ್ ನ ಭದ್ರಕೋಟೆ ಇದ್ದಂತೆ. ಇಲ್ಲಿ ಜೆಡಿಎಸ್ ಗೆಲುವು ಖಚಿತವಾಗಿದೆ. ಆದರೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿಯಾಗಿ, ಪ್ರಚಾರ ಕಾರ್ಯ ಕೂಡ ನಡೆಸಿದ್ದಾರೆ. ಯಾರೊಂದಿಗೂ ಒಪ್ಪಂದಗಳು ಬೇಡ, ಸ್ವತಂತ್ರವಾಗಿ ಪಕ್ಷ ಸ್ಥಾಪನೆ ಮಾಡಬೇಕೆಂಬ ನುಡಿಯನ್ನು ನುಡಿದು ಹೋಗಿದ್ದಾರೆ.

ಅಮಿತ್ ಶಾ ಅವರ ಮಾತಿನಿಂದ ಸಮ್ಮಿಶ್ರ ಮಾಡಿಕೊಳ್ಳುವುದು ಡೌಟ್ ಎಂದೇ ಭಾವಿಸಲಾಗಿದೆ. ಬಳಿಕ ಬಿಜೆಪಿ ಎಚ್ಚರವಹಿಸಿದೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಗೆಲ್ಲುವುದಕ್ಕೆ ಏನೆಲ್ಲಾ ಮಾಡಬೇಕು ಎಂಬ ಲೆಕ್ಕಚಾರ ಹಾಕುವುದಕ್ಕೆ ಶುರು ಮಾಡಿದೆ. ಅದರ ಭಾಗವಾಗಿಯೇ ಇಂದು ಮಂಡ್ಯ ಉಸ್ತುವಾರಿಯನ್ನು ಬದಲಾಯಿಸಿದ್ದಾರೆ.

ಈ ಹಿಂದೆ ಸಚಿವ ಗೋಪಾಲಯ್ಯ ಅವರನ್ನು ಮಂಡ್ಯ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಈ ಭಾಗದಲ್ಲಿ ಒಕ್ಕಲಿಗರ ಸಂಖ್ಯೆ ಅಧಿಕವಾಗಿರುವ ಕಾರಣ ಈಗ ಉಸ್ತುವಾರಿಯನ್ನು ಗೋಪಾಲಯ್ಯ ಕೈಯಿಂದ ತೆಗೆದುಕೊಂಡು ನೇರವಾಗಿ ಸಚಿವ ಆರ್ ಅಶೋಕ್ ಕೈಗೆ ಇಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಳಗಾವಿ ಅಧಿವೇಶನದಲ್ಲಿ ವಕೀಲ ರಕ್ಷಣಾ ಕಾಯ್ದೆ ಜಾರಿಗೆ ತರಲು ಚಳ್ಳಕೆರೆ ತಾಲೂಕು ವಕೀಲರ ಸಂಘದ ಒತ್ತಾಯ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729   ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.08 : ಗುಲ್ಬರ್ಗ ಜಿಲ್ಲೆಯ ಉದ್ದೂರು ತಾಲೂಕಿನ ವಕೀಲರಾದ ಈರಣ್ಣಗೌಡಮಾಳಿ ಪಾಟೀಲ್ ರವರ ಮೇಲೆ ಯಾವುದೇ

ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳಸಬೇಕು : ಜಿಲ್ಲಾಧಿಕಾರಿ ದಿವ್ಯಪ್ರಭು

ಚಿತ್ರದುರ್ಗ.ಡಿ.08: ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳಸಬೇಕು, ಆಗ ಮಾತ್ರ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ

ಚಳ್ಳಕೆರೆಯಲ್ಲಿ ಹೃದಯ ವಿದ್ರಾವಕ ಘಟನೆ | ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ನೇಣಿಗೆ ಶರಣಾದ ತಾಯಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.08 : ಇಬ್ಬರು ಮಕ್ಕಳನ್ನು ಪಾತ್ರ ನೀರಿನಲ್ಲಿ ಮುಳುಗಿಸಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ

error: Content is protected !!