Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಳೆ ಹಾನಿಯಿಂದಾಗಿ ಕಂಗಾಲಾಗಿರುವ ರೈತರಿಗೆ ಪರಿಹಾರ ನೀಡಿ : ಸಿದ್ದನಗೌಡ ಪಾಟೀಲ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ , (ನ.04): ಸಣ್ಣ ರೈತ ದೊಡ್ಡ ರೈತ ಎಂದು ಬೇರ್ಪಡಿಸದೆ ಬೆಳೆ ಹಾನಿಯಿಂದಾಗಿ ಕಂಗಾಲಾಗಿರುವ ಎಲ್ಲರಿಗೂ ಸಮಾನವಾಗಿ ಪರಿಹಾರ ವಿತರಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರೈತ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಸಿದ್ದನಗೌಡ ಪಾಟೀಲ್ ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಿಪರೀತ ಮಳೆಯಾಗಿರುವುದರಿಂದ ಎಲ್ಲಾ ಬಗೆಯ ಬೆಳೆ ನಾಶವಾಗಿದೆ. ಬಿತ್ತಿದ ಖರ್ಚು ಸಿಗದ ಕಾರಣ ಈರುಳ್ಳಿಯನ್ನು ರೈತರು ಹೊಲದಲ್ಲಿಯೇ ಕೊಳೆಯಲು ಬಿಟ್ಟಿದ್ದಾರೆ. ಇನ್ನು ಶೇಂಗಾ ಹೇಳ ಹೆಸರಿಲ್ಲದಂತಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಣ್ಣ ಹಿಡುವಳಿದಾರ, ದೊಡ್ಡ ಹಿಡುವಳಿದಾರ ಎಂದು ಸರ್ಕಾರ ತಾರತಮ್ಯ ಮಾಡುವ ಬದಲು ಕೂಡಲೆ ಪರಿಹಾರ ನೀಡಬೇಕು. ಹತ್ತಿ, ಮೆಕ್ಕೆಜೋಳ ಒಂದು ಎಕರೆಗೆ 25 ಸಾವಿರ ರೂ.ಪರಿಹಾರ ಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ತವರು ಜಿಲ್ಲೆ ಹಾವೇರಿಯಲ್ಲಿಯೇ ಶೇಂಗಾ ಹಾಳಾಗಿದೆ. ಧಾರವಾಡ ಕೂಡ ಹೊರತಾಗಿಲ್ಲ ಎಂದು ಅನ್ನದಾತ ರೈತನ ಸಂಕಷ್ಠವನ್ನು ಹೇಳಿಕೊಂಡರು.

ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆಗೆ ಹಳದಿ, ಕಪ್ಪು ಚುಕ್ಕೆ ಮೂಡಿ ಮಳೆಗೆ ನೆಲಕ್ಕುದುರುತ್ತಿವೆ. ಯಾವ ಬೆಳೆಯೂ ರೈತನ ಕೈಗೆ ಸಿಗುತ್ತಿಲ್ಲ. ಒಂದು ಎಕರೆ ಅಡಿಕೆ ತೋಟಕ್ಕೆ ಒಂದು ಲಕ್ಷ ರೂ.ಪರಿಹಾರ ಕೊಡಬೇಕು. ಮೈಸೂರು, ಹಾಸನದಲ್ಲಿ ಅತಿಯಾದ ಮಳೆಯಿಂದಾಗಿ ತಂಬಾಕು ಹಾಳಾಗಿ ಖರ್ಚಿಗೂ ಕೈಯಲ್ಲಿ ಕಾಸಿಲ್ಲದಂತೆ ರೈತರು ಪರದಾಡುತ್ತಿದ್ದಾರೆ. ಕಾಯಿ, ಪಲ್ಯೆ, ಮಳೆನೀರು ಪಾಲಾಗಿದೆ. ಹಣ ಪಾವತಿಸಿರುವ ರೈತರ ಖಾತೆಗಳಿಗೂ ಬೆಳೆವಿಮೆ ಜಮೆ ಆಗಿಲ್ಲ. ರೈತರನ್ನು ನಿರ್ಲಕ್ಷಿಸಿದರೆ ಸರ್ಕಾರ ಮುಂದಿನ ದಿನಗಳಲ್ಲಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆಂದು ಸಿದ್ದನಗೌಡ ಪಾಟೀಲ್ ಎಚ್ಚರಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಉಪಾಧ್ಯಕ್ಷರುಗಳಾದ ಸಿದ್ದರಾಮಪ್ಪ ರಂಜಿಣಿಗಿ, ಬಿ.ಸಿ.ಪಾಟೀಲ್, ನರಸಿಂಹಪ್ಪ, ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಬಸ್ತಿಹಳ್ಳಿ ನಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಬಸವಣ್ಣಪ್ಪ, ನೀಲಪ್ಪ, ವೀರಣ್ಣ, ಷಣ್ಮುಖಪ್ಪ, ಗಿರೀಶ್‍ರೆಡ್ಡಿ, ರವಿ, ನಿಂಗಮ್ಮ, ನಿರಂಜನಮೂರ್ತಿ, ಬಸವರಾಜಪ್ಪ, ಪರಮಶಿವಣ್ಣ, ಸಿ.ಕುಬೇಂದ್ರನಾಯ್ಕ, ಬಿ.ಗಜೇಂದ್ರ, ಜಿ.ಜ್ಯೋತಿ ಜಮ್ಮೇನಹಳ್ಳಿ, ಮೈಸೂರಿನ ನಿಂಗಮ್ಮ, ರವಿ, ರವಿಸಿದ್ದೇಗೌಡ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ವಾಪಸ್ ಆದರೂ, ಧಾರವಾಡದಲ್ಲಿದ್ದಾರೆ 17 ಸ್ಪರ್ಧಿಗಳು..!

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ವಾಪಸ್ ತೆಗೆದುಕೊಳ್ಳುವುದಕ್ಕೆ ನಿನ್ನೆಯೇ ಕೊನೆ ದಿನವಾಗಿತ್ತು. ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧೆಗೆ ಇಳಿದಿದ್ದರು. ಆದರೆ ಕೊನೆ ಗಳಿಗೆಯಲ್ಲಿ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಆದರೂ ಧಾರವಾಢ ಲೋಕಸಭಾ ಕ್ಷೇತ್ರದಲ್ಲಿ

ಚಿತ್ರದುರ್ಗಕ್ಕೆ ಪ್ರಿಯಾಂಕ ಗಾಂಧಿ ಭೇಟಿ..ಅಭ್ಯರ್ಥಿ ಚಂದ್ರಪ್ಪಗೆ ಅನುಕೂಲವೆಂದ ಮಾಜಿ ಸಚಿವ ಆಂಜನೇಯ

ಲೋಕಸಭಾ ಚುನಾವಣೆಯ ಹಿನ್ನೆಲೆ ಪ್ರಿಯಾಂಕ ಗಾಂಧಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇಂದು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದು, ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಈ ಬಗ್ಗೆ ಮಾಜಿ ಸಚಿವ

ಬರ ಪರಿಹಾರ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ನೀಡದಿರುವುದಕ್ಕೆ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ,

error: Content is protected !!