ಬಿಜೆಪಿ ಸೇರಿದ ಹುತಾತ್ಮ ಬಿಪಿನ್ ರಾವತ್ ಸಹೋದರ..!

ಹುತಾತ್ಮ ಬಿಪಿನ್ ರಾವತ್ ಸಹೋದರ ವಿಜಯ್ ರಾವತ್ ಇಂದು ಬಿಜೆಪಿ ಪಕ್ಷ ಸೇರಿದ್ದಾರೆ. ಕರ್ನಲ್ ಆಗಿ ಸೇನೆಯಿಂದ ನಿವೃತ್ತರಾಗಿರುವ ವಿಜಯ್ ರಾವತ್ ಇದೀಗ ಬಿಜೆಪಿ ಸೇರಿದ್ದಾರೆ.

ಉತ್ತರಾಖಂಡ್ ನಿಂದ ವಿಜಯ್ ರಾವತ್ ಅವರನ್ನ ಕಣಕ್ಕಿಳಿಸಬಹುದು ಎಂಬ ಮಾತು ಹರಿದಾಡ್ತಿದೆ. ಪಕ್ಷ ಸೇರಿದ ಬಳಿಕ ಮಾತನಾಡಿದ ವಿಜಯ್ ರಾವತ್, ಸಿಎಂ ಪುಷ್ಕರ್ ಸಿಂಗ್ ಧಾಮಿ, ರಾಜ್ಯದ ಅಭಿವಯಯ ವಿಚಾರದಲ್ಲಿ ವಿಶಿಷ್ಟ ಕಾಳಜಿ ಹೊಂದಿದ್ದಾರೆ. ನನ್ನ ಸಹೋದರ ಬಿಪಿನ್ ರಾವತ್ ಕಂಡಿದ್ದ ಕನಸುಗಳಿಗೂ ಹಾಗೂ ಸಿಎಂ ಯೋಚಿಸುವ ರೀತಿಗೂ ತುಂಬಾ ಸಾಮ್ಯತೆ ಇದೆ. ಹೀಗಾಗಿ ನಾನು ಪಕ್ಷ ಸೇರಿದ್ದೇನೆ ಎಂದಿದ್ದಾರೆ.

ಇನ್ನು ವಿಜಯ್ ರಾವತ್ ಅವರನ್ನ ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ರಾಜ್ಯಸಭಾ ಸಂಸದ ಅನಿಲ್ ಬಲೂನಿರವರ ನೇತೃತ್ವದಲ್ಲಿ ಪಕ್ಷ ಸೇರಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *