ಗಾಂಧಿ ಜಯಂತಿ ಪ್ರಯುಕ್ತ ವಿಭಿನ್ನ ಆಚರಣೆ : ಉಪ್ಪಿನ ಪ್ಯಾಕೆಟ್ ಹಂಚಿದ ವಾಟಾಳ್ ನಾಗರಾಜ್..!

suddionenews
1 Min Read

ಬೆಂಗಳೂರು: ಇಂದು ಗಾಂಧಿ ಜಯಂತಿ ಆಚರಣೆ. ಎಲ್ಲೆಡೆ ಗಾಂಧಿ ಫೋಟೋಗೆ ಹಾರ ಹಾಕಿ, ಪುಷ್ಪ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ವಿಭಿನ್ನವಾಗಿ ಗಾಂಧಿ ಜಯಂತಿ ಆಚರಿಸಿದ್ದಾರೆ.

ಹೌದು, ಮೆಜೆಸ್ಟಿಕ್ ನಲ್ಲಿ ಗಾಂಧಿ ಫೋಟೋ ಇಟ್ಟು ಗಾಂಧಿ ಜಯಂತಿ ಆಚರಿಸಿದ್ದು, ಅದರ ಜೊತೆಗೆ ಉಪ್ಪಿನ ಪಾಕೇಟ್ ಗಳನ್ನು ಇಟ್ಟಿದ್ದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಅಲ್ಲಿ ಬಂದವರಿಗೆ ಉಪ್ಪನ್ನು ನೀಡಿ ಶುಭಕೋರಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ದೊಡ್ಡ ಗಾಂಧಿ ಫೋಟೋ ಮುಂದೆ ಒಂದಷ್ಟು ಉಪ್ಪಿನ ಪ್ಯಾಕೇಟ್ ಗಳನ್ನ ಇಡಲಾಗಿದೆ. ಇಂದು ಗಾಂಧಿ‌ ಜಯಂತಿ‌ ಪ್ರಯುಕ್ತ ವಿಭಿನ್ನವಾಗಿ ಆಚರಣೆ ಮಾಡಪಾಗಿದೆ. ವಾಟಾಳ್ ನಾಗರಾಜ್ ಮಾಡುವ ಸಾಕಷ್ಟು ಪ್ರತಿಭಟನೆಗಳು ವಿಭಿನ್ನ ಶೈಲಿಯಲ್ಲೆ ಇರಲಿವೆ. ಹೀಗಾಗಿ ಇಂದು ಕೂಡ ಡಿಫ್ರೆಂಡ್ ಆಗಿನೇ ಆಚರಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *