ಕೊರೊನಾ ರೂಲ್ಸ್ ಮಧ್ಯೆಯೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್..!

suddionenews
1 Min Read

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55 ನೇ ಹುಟ್ಟುಹಬ್ಬವನ್ನ ಬಹಳ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ನೂರಾರು ಜನ ಅಭಿಮಾನಿಗಳು ಕೂಡ ಇವರ ಹುಟ್ಟು ಹಬ್ಬವನ್ನ ಒಟ್ಟಾಗಿ ಆಚರಿಸಿದ್ದಾರೆ. ಈ ವೇಳೆ ಕೊರೊನಾ ನಿಯಮ ಗಾಳಿಯಲ್ಲಿ ತೂರಿ ಹೋಗಿದೆ.

ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ ಇಷ್ಟು ದಿನ ಬಳ್ಳಾರಿಗೆ ಹೋಗಲು ಅನುಮತಿ ಇರಲಿಲ್ಲ. ಇತ್ತೀಚೆಗೆ ಕೋರ್ಟ್ ಅದಕ್ಕೆ ಅನುಮತಿ ನೀಡಿದೆ. ಈ ಬೆನ್ನಲ್ಲೇ ಬಳ್ಳಾರಿ ನಿವಾಸದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು, ಬಳಿಕ ಮನೆ ದೇವರಿಗೆ ತೆರಳಿದ್ದಾರೆ.

ಕುಟುಂಬ ಸಮೇತ ಮನೆ ದೇವರು ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿದ ಅವರು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜನಾರ್ಧನ್ ರೆಡ್ಡಿ ಅವರಿಗೆ ಸೋಮಶೇಖರ ರೆಡ್ಡಿ, ಶ್ರೀರಾಮುಲು ಕೂಡ ಸಾಥ್ ನೀಡಿದ್ದಾರೆ. ಅಷ್ಟೆ ಅಲ್ಲದೆ ಜನಾರ್ಧನ ರೆಡ್ಡಿ ಅವರಿಗೆ ತುಲಾಭಾರ ಮಾಡಲಾಗಿದೆ. ಅದಕ್ಕೆ 55 ಚಿನ್ನದ ನಾಣ್ಯ, 55 ಬೆಳ್ಳಿ ನಾಣ್ಯಗಳನ್ನಿಟ್ಟು ತುಲಭಾರ ಮಾಡಲಾಗಿದೆ. ಈ ವೇಳೆ ಬೆಂಬಲಿಗರು, ಅಭಿಮಾನಿಗಳು ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *