ಆಕಸ್ಮಿಕ ಬೆಂಕಿ : ಹೊತ್ತಿ ಉರಿದ ಗುಡಿಸಲು , ತುಂತುರು ಹನಿ ಪೈಪ್ ಗಳು

suddionenews
1 Min Read

 

ಸುದ್ದಿಒನ್, ಚಳ್ಳಕೆರೆ, (ಅ.01) : ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ತುಂತುರು ಹನಿ ಪೈಪ್ ಗಳು ಹೊತ್ತಿ‌ ಉರಿದ ಘಟನೆ ಕಾಮಸಮುದ್ರದಲ್ಲಿ ಬೆಳಿಗ್ಗೆ 10 ಸಮಯದಲ್ಲಿ‌ ನಡೆದಿದೆ.

ಗ್ರಾಮದ ನರಸಿಂಹಪ್ಪ ಅವರ ತೋಟದಲ್ಲಿ ಈ ಘಟನೆ‌ ನಡೆದಿದ್ದು, ನರಸಿಂಹಪ್ಪ ಅವರ ತೋಟದಲ್ಲಿ ಮೋಟರ್ ಗೆ ಅಳವಡಿಸಿದ್ದ ವಿದ್ಯುತ್ ಉಪಕರಣ ಪೆಟ್ಟಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಅಲ್ಲಿದ್ದ ತುಂತುರು ಹನಿ ಪೈಪ್ ಗಳಿಗೆ ಬೆಂಕಿ ತಾಗಿ ತುಂತುರು ಹನಿ ಪೈಪ್ ಗಳ ಧಗಧಗನೆ ಒತ್ತಿ ಉರಿದಿವೆ ಎನ್ನಲಾಗುತ್ತಿದೆ.

ತುಂತುರು ಪೈಪ್ ಗಳಿಗೆ ಬೆಂಕಿ ಬಿದ್ದ ಪರಿಣಾಮ ಸಂಪೂರ್ಣವಾಗಿ ಪೈಪ್ ಗಳು ಸುಟ್ಟು ಕರಲಾಗಿ 1 ಲಕ್ಷ ರೂ.ನಷ್ಟ ಸಂಭವಿಸಿದೆ  ಎಂದು ರೈತ ನರಸಿಂಹಪ್ಪ ತಿಳಿಸಿದ್ದಾರೆ.

ಚಳ್ಳಕೆರೆ : ತಾಲ್ಲೂಕಿನ ಕರೆಕಾಟ್ಲಹಟ್ಟಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಧಗಧಗನೆ ಹೊತ್ತಿ ಉರಿದಿದೆ.

ಗ್ರಾಮದ ಆರಬೆಳ್ಳು ಪಾಲಯ್ಯ ಅವರಿಗೆ ಸೇರಿದ ಗುಡಿಸಲಾಗಿದ್ದು, ಗುಡಿಸಲಿನಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಪರಿಣಾಮ ಗುಡಿಸಲು ಹೊತ್ತಿ ಉರಿದಿದೆ. ಗುಡಿಸಲಿನಲ್ಲಿ ಉದ್ದ ತಾಡ್ಪಾಲ್ , ಅಡುಗೆ ಸಾಮಾನುಗಳು ಸುಟ್ಟು ಕರಲಾಗಿದೆ.

ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *