Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಿದೆ ವಿಂಡೋಸೀಟ್ ಸರೆಂಡರ್ ಹಾಡು..!

Facebook
Twitter
Telegram
WhatsApp

ವಿಂಡೋಸೀಟ್ ಬಗ್ಗೆ ಈಗಾಗಲೇ ನಿಮಗೆಲ್ಲಾ ಗೊತ್ತೆ ಇದೆ. ಶೀತಲ್ ಶೆಟ್ಟಿ ನಿರ್ದೇಶನ ಮಾಡ್ತಿರೋ ಈ ಸಿನಿಮಾದ ಅಪ್ಡೇಟ್ ಆಗಾಗ ನಿಮ್ಗೆಲ್ಲಾ ಸಿಗುತ್ತಲೇ ಇತ್ತು. ಹಾಗಾಗಿಯೇ ಸಿನಿಮಾ ಮೇಲಿನ ಭರವಸೆ-ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಬೆಳೆಯುತ್ತಾ ಹೋಯ್ತು. ಸಿನಿಮಾ ನೋಡಲೇಬೇಕೆಂಬ ಕಂಟೆಂಟ್ ಕೊಟ್ಟಿರುವ ವಿಂಡೋಸೀಟ್ ಇದೀಗ ಹೊಸದೊಂದು ಹಾಡನ್ನ ರಿಲೀಸ್ ಮಾಡಿದೆ.

ಸರೆಂಡರ್ ಅನ್ನೋ ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ಹಾಡನ್ನ ನೋಡಿದ್ರೆ ಖಂಡಿತ ಪಡೆ ಹೈಕ್ಳು ಮನಸ್ಸು ಡಿಸ್ಟರ್ಬ್ ಆಗದೆ ಇರದು. ಆ ಮಟ್ಟಿಗಿನ ಮಾದಕತೆ ಹಾಡಿನಲ್ಲಿ ತುಂಬಿದೆ. ಇಂಗ್ಲೀಷ್ ಪದಗಳಲ್ಲೇ ಎಲ್ಲಾ ಹುಡುಗರ ಚಿತ್ತ ಕದ್ದಿದೆ ವಿಂಡೋಸೀಟ್. ಹಾಡನ್ನ ನೋಡಿದವರ ಕಣ್ಣುಗಳು ಒಂದು ಕ್ಷಣವೂ ಆ ಕಡೆ ಈ ಕಡೆ ಹೋಗಲ್ಲ. ಅಷ್ಟು ರೋಮಾಂಚನಕಾರಿಯಾಗಿ ಹಾಡನ್ನ ಸೆರೆ‌ ಹಿಡಿಯಲಾಗಿದೆ.


ಜಾಝ್ ಶೈಲಿಯಲ್ಲಿ ಮೂಡಿಬಂದ ಸರೆಂಡರ್ ಹಾಡು ಅದ್ಭುತವಾಗಿದೆ ಅನ್ನೋದರಲ್ಲಿ ಎರಡೂ ಮಾತಿಲ್ಲ. ನಿಮ್ಗೂ ಅದರ ಅನುಭವ ಆಗ್ಬೇಕು ಅಂದ್ರೆ ಒಮ್ಮೆ ಹಾಡನ್ನ ನೋಡ್ಬಿಡಿ. ಆಗ ನಿಮ್ಮ ಗಮನಕ್ಕೂ ಆ ಅನುಭವ ಬಂದೇ ಬರುತ್ತೆ. ಇನ್ನೊಂದು ವಿಶೇಷ ಅಂದ್ರೆ ಜಾಝ್ ಶೈಲಿಯ ಹಾಡು ಕನ್ನಡದ ಪಾಲಿಗೆ ಇದೇ ಮೊದಲು. ಈ ಹಾಡು ಎಲ್ಲರ ಹಾರ್ಟ್ ಗೂ ಫೇವರಿಟ್ ಆಗಿದೆ ಅನ್ನೋದಕ್ಕೆ ಕೆಲವೇ ಗಂಟೆಗಳಲ್ಲಿ ಆಗಿರೋ ವೀಕ್ಷಣೆ, ಕಮೆಂಟ್ ಗಳೇ ಸಾಕ್ಷಿ.

ಮಹೇಶ್ ರಘುನಂದನ್ ಬರೆದಿರೋ ಸಾಹಿತ್ಯಕ್ಕೆ, ಸೌಂದರ್ಯ ಜಯಚಂದ್ರನ್ ಧ್ವನಿ ನೀಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಸಿನಿಮಾದಲ್ಲೂ ಸಂಗೀತದ ಮ್ಯಾಜಿಕ್ ಮಾಡಿದ್ದಾರೆ. ಸಿನಿಮಾಗೆ ಕೆ ಎಸ್ ಕೆ ಶೋ ರೀಲ್ ಬ್ಯಾನರ್ ನಡಿ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮೆರಾ ಹಿಡಿದಿದ್ದು, ರಿತ್ವಿಕ್ ಸಂಕಲನವಿದೆ.

ನಿರೂಪ್ ಭಂಡಾರಿ ನಾಯಕರಾಗಿದ್ದು, ಅಮೃತಾ ಅಯ್ಯರ್ ಹಾಗೂ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಉಳಿದಂತೆ ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

error: Content is protected !!