ಮೂರು ರಾಜ್ಯಗಳ ರೈತರು ಖುಷಿ ಪಡೋ ಸುದ್ದಿ : ಮತ್ತೆ ಭರ್ತಿಯಾಯ್ತು ತುಂಗಾ ಭದ್ರಾ ನದಿ

ಬಳ್ಳಾರಿ: ಗೇಟ್ ಮುರಿದು ಬಿದ್ದು ತುಂಗಾ ಭದ್ರಾ ನದಿಯಲ್ಲಿದ್ದ ನೀರು ಅನಿವಾರ್ಯವಾಗಿ ಹೊರಗೆ ಬಿಡಲೇಬೇಕಾಗಿತ್ತು. ತುಂಗಾಭದ್ರಾ ನದಿ ನೀರಿನಿಂದ ಮೂರು ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಗೇಟ್ ಸರಿಯಾದ ಮೇಲೆ ನೀರಿನ ಬಗ್ಗೆಯೇ ರೈತರಿಗೆ ಚಿಂತೆಯಾಗಿತ್ತು. ಇದೀಗ ಆ ಚಿಂತೆ ಕಳೆದಿದೆ, ನೀರು ಮತ್ತೆ ಭರ್ತಿಯಾಗಿದೆ.

ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದರೆ ತುಂಗಾಭದ್ರಾ ಡ್ಯಾಂ ತುಂಬುವ ನಿರೀಕ್ಷೆ ಇತ್ತು. ಅದರಂತೆ ಗೇಟ್ ರಿಪೇರಿ ಕಾರ್ಯದ ಬಳಿಕ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗಿದೆ. ಹೀಗಾಗಿ ನಿರೀಕ್ಷೆಗೂ ಮೀರಿ ಬಹಳ ಬೇಗನೇ ತುಂಗಾಭದ್ರಾ ಡ್ಯಾಂ ಭರ್ತಿಯಾಗಿದೆ. ಇದರಿಂದ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಸಂತಸವೂ ಹೆಚ್ಚಾಗಿದೆ.

‘ಎಲ್ಲರ ಪ್ರಾರ್ಥನೆಯಿಂದ, ವರುಣನ ಕೃಪೆಯಿಂದ ತುಂಗಾಭದ್ರಾ ಡ್ಯಾಂ ಮತ್ತೆ ತುಂಬಿದೆ. ಹೆಚ್ಚುವರಿ ನೀರನ್ನು ನದಿಗೆ ಕ್ರೈಸ್ಟ್ ಗೇಟ್ ಮುಖಾಂತರ ಬಿಡಲಾಗುವುದು’ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. ತುಂಗಾ ಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರು ಜಾಸ್ತಿಯಾದಾಗಲೇ ಭರ್ತಿಯಾಗುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಗೇಟ್ ಕಿತ್ತುಕೊಂಡು ಬಿಟ್ಟಿತ್ತು. ದುರಸ್ತಿ ಕಾರ್ಯ ನಡೆಯುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ನೀರು ತುಂಬುತ್ತೆ ಎಂಬ ಭರವಸೆಯನ್ನು ನೀಡಿದ್ದರು. ಇದೀಗ ಅದು ಸತ್ಯವಾಗಿದೆ. ತುಂಗಾಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ: 1631.92 ಅಡಿ ಇದೆ. ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ : 105.788 ಟಿಎಂಸಿಯನ್ನು ಹೊಂದಿದೆ. ಕಳೆದ 24 ಗಂಟೆಯ ಒಳಹರಿವು ಸರಾಸರಿ : 39945 ಕ್ಯುಸೆಕ್ ಆಗಿದೆ. ಇನ್ನು ಕಳೆದ 24 ಗಂಟೆಯ ಹೊರ ಹರಿವು : 15235 ಕ್ಯುಸೆಕ್ ಆಗಿದೆ.

suddionenews

Recent Posts

ಈ ರಾಶಿಯ ಉದ್ಯೋಗಿಗಳಿಗೆ ಪರ್ಮನೆಂಟ್ ಆಗುವ ಸಿಹಿ ಸಂದೇಶ

ಈ ರಾಶಿಯ ಉದ್ಯೋಗಿಗಳಿಗೆ ಪರ್ಮನೆಂಟ್ ಆಗುವ ಸಿಹಿ ಸಂದೇಶ, ಈ ರಾಶಿಯ ಉದ್ಯೋಗಿಗಳಿಗೆ ತುಂಬಾ ಅಡಚಣೆ ಮುಂದುವರೆಯಲಿದೆ, ಗುರುವಾರದ ರಾಶಿ…

2 hours ago

ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಫೆ.12: ದ್ವಿಚಕ್ರ  ವಾಹನ ಸವಾರರು ಪ್ರತಿಯೊಬ್ಬರೂ ಕೂಡ ಜೀವ ರಕ್ಷಣೆ ಸಂಬಂಧ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ವಾಹನ…

11 hours ago

ದೇಶದ ಬೆಳವಣಿಗೆಯಲ್ಲಿ ಫ್ಯಾಬ್ರಿಕೇಷನ್ ಪಾತ್ರ ದೊಡ್ಡದು : ಎಂ.ಕೆ.ತಾಜ್‍ಪೀರ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

11 hours ago

ವಿಜೃಂಭಣೆಯಿಂದ ನೆರವೇರಿದ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

11 hours ago

ಮೈಕ್ರೋ ಫೈನಾನ್ಸ್ ಹಾವಳಿ: ಕೊನೆಗೂ ಸಿಕ್ತು ರಾಜ್ಯಪಾಲರ ಅನುಮೋದನೆ

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿದೆ. ಗ್ರಾಮೀಣ ಭಾಗದ ಜನರನ್ನೇ ಟಾರ್ಗೆಟ್ ಮಾಡುವ ಫೈನಾನ್ಸ್ ಕಂಪನಿಗಳು ಸಾಲ ಸೌಲಭ್ಯವನ್ನು…

13 hours ago

ನಿಧಿ ಆಸೆಗಾಗಿ ಜ್ಯೋತಿಷಿ ಮಾತು ಕೇಳಿ ಕೊಲೆ : ಪರುಶುರಾಮಪುರ ಪೊಲೀಸರಿಂದ ಇಬ್ಬರ ಬಂಧನ

ಚಿತ್ರದುರ್ಗ: ನಿಧಿ ಆಸೆ ಎಂಬುದು ಜನರಲ್ಲಿ ಇನ್ನು ಹೋಗಿಲ್ಲ. ಹೂತಿಟ್ಟಿರುವ ನಿಧಿ ಸಿಕ್ಕರೆ ಶ್ರೀಮಂತರಾಗಿ ಬಿಡಬಹುದು ಎಂಬ ಬಯಕೆ. ನಿಧಿ…

13 hours ago