ಅಪ್ಪು ಸಾವಿನ ತನಿಖೆಗೆ ಒತ್ತಾಯಿಸಿದ ಅಭಿಮಾನಿ : ಶಿವಣ್ಣ ಹೇಳಿದ್ದೇನು ಗೊತ್ತಾ..?

suddionenews
1 Min Read

ಬೆಂಗಳೂರು: ಪುನೀತ್ ರಾಜ್ ಕುಮಾರ್ ಸಾವಿನ ಕುರಿತು ಸಂಪೂರ್ಣ ತನಿಖೆ ಮಾಡುವಂತೆ, ಸದಾಶಿವನಗರ ಠಾಣೆಗೆ ಪುನೀತ್ ರಾಜಕುಮಾರ್ ಅಭಿಮಾನಿ ಅರುಣ್ ಪರಮೇಶ್ವರ್ ದೂರು ನೀಡಲು ಸಿದ್ಧರಾಗಿದ್ದಾರೆ.

ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್ ಗೆ ಯಾವ ಯಾವ ಚಿಕಿತ್ಸೆಯನ್ನ ನೀಡಲಾಯಿತು. ಪುನೀತ್ ರಮಣಶ್ರೀ ಆಸ್ಪತ್ರೆಗೆ ಹೋದ ಸಮಯ, ಆಸ್ಪತ್ರೆಯ ಸಿಸಿಟಿವಿ ವಿಡಿಯೋಗಳನ್ನ ಬಹಿರಂಗ ಪಡಿಸಬೇಕು. ವಿಕ್ರಮ್ ಆಸ್ಪತ್ರೆಗೆ ತಡವಾಗಿ ಹೊಗಲು ಕಾರಣವೇನು..? ವಿಕ್ರಮ್ ಆಸ್ಪತ್ರೆಗೆ ಹೊಗಲು ರಮಣಶ್ರೀ ಆಸ್ಪತ್ರೆಯವರು ಯಾಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ. ಈ ಕುರಿತು ಸಮಗ್ರ ತನಿಖೆ ಮಾಡಿ ಸತ್ಯಾಸತ್ಯತೆಯನ್ನ ಜನರ ಮುಂದಿಡಬೇಕೆಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಿವಣ್ಣ, ಅಪ್ಪುನೇ ನಮ್ಮ ಜೊತೆ ಇಲ್ಲ. ದೂರು ನೀಡಿ ಏನು ಪ್ರಯೋಜನ. ದೂರು ಕೊಡೋದು ಯಾಕೆ…? ನಾವೂ ಇದೆ ಮಾಡಿ ಅದೇ ಮಾಡಿ ಅಂತ ಹೇಳಲ್ಲ. ಅಭಿಮಾನಿಗಳ ಹೃದಯಕ್ಕೆ ಅಪ್ಪು ಏನೆಂದು ಗೊತ್ತು ಎಂದು ಶಿವಣ್ಣ ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *