ಈಶ್ಚರಪ್ಪ ಮೊದಲು ರಾಜೀನಾಮೆ ಕೊಡುವುದು ಉತ್ತಮ, ಜೊತೆಗೆ ಹೋದವರ ತನಿಖೆಯೂ ಆಗಬೇಕು : ಹೆಚ್ ಡಿ ಕುಮಾರಸ್ವಾಮಿ

ರಾಮನಗರ: ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಂತೋಷ್ ಆರೋಪ ಮಾಡಿದ್ದರಲ್ಲಿ ಲಘುವಾಗಿ ತೆಗೆದುಕೊಳ್ಳುವುದಕ್ಕೆ ಹೋಗಲ್ಲ. ಅವರು ಮಾಡಿರೋ ಆರೋಪದ ಬಗ್ಗೆ ಬೀದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಈಗಿನ ಒಂದು ವ್ಯವಸ್ಥೆ ಆ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ನನ್ನ ಅಭಿಪ್ರಾಯ ಏನು ಅಂದ್ರೆ ಸರ್ಕಾರ ಇವತ್ತು ಇದನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಎಂಎಲ್ಎಗಳಿಂದ, ಮಂತ್ರಿಗಳಿಂದಲೂ ಕೇಳುತ್ತಾರೆ ಅನ್ನೋ ಆರೋಪ ಇದೆ. ಅದು ನಡೆಯುತ್ತಿದೆ ಕೂಡ. ಹೇಗೆ ಸರಿಪಡಿಸಬೇಕಾಗಿದೆ.

ಅವರು ಮೊದಲು ರಾಜೀನಾಮೆ ಕೊಡುವಂತದ್ದು ಸೂಕ್ತ. ಇದರಲ್ಲಿ ಹಲವಾರು ರೀತಿಯ ಸಂಶಯಗಳಿದ್ದಾವೆ. ಈ ಸಾವಿನ ಹಿಂದೆ ಹಲವಾರು ರೀತಿಯ ಪ್ರೇರೇಪಣೆ, ಸಂಶಯಗಳು ಕಂಡು ಬಂದಿದೆ. ಆ ಸತ್ಯಾಂಶವನ್ನು ಹೊರ ತರಬೇಕಾದದ್ದು ಸರ್ಕಾರದ ಜವಬ್ದಾರಿಯಾಗಿದೆ. ಇದರಲ್ಲಿ ಬಹಳ ಕಾಣದ ಕೈಗಳ ಚಿತಾವಣೆ ಇರುವಂತದ್ದು ಮೇಲ್ನೋಟಕ್ಕೆ ಕಾಣುತ್ತಿದೆ. ಅದರ ಜೊತೆಗೆ ಆ ವ್ಯಕ್ತಿ ನಾಲ್ಕು ಕೋಟಿ ಕೆಲಸವನ್ನು ವಿತೌಟ್ ವರ್ಕ್ ಆರ್ಡರ್ ಮಾಡುವುದಕ್ಕೆ ಯಾರು ಪರ್ಮಿಷನ್ ಕೊಟ್ಟಿದ್ದು.?

ಯಾವ ಇಂಜಿನಿಯರ್ ಆಗಲು, ಸರ್ಕಾರದ ಸಂಸ್ಥೆಗಳಾಗಲಿ ಅವರ ಗಮನಕ್ಕೆ ಬಾರದೆ ಇರುವ ಕೆಲಸಕ್ಕೆ ಪೇಮೆಂಟ್ ಕೊಡಬೇಕು ಅಂದರೆ ಇದು ಟೆಕ್ನಿಕಲೀ ಸಮಸ್ಯೆ ಇದೆ. ಆದರೆ ಈ ಮಧ್ಯೆದಲ್ಲಿ ಪರ್ಸಂಟೇಜ್ ಬಗ್ಗೆಯೆಲ್ಲಾ ಚರ್ಚೆ ನಡೆಯುತ್ತಿದೆ, ಇದೆಲ್ಲದರ ಬಗ್ಗೆಯೂ ಸಮಗ್ರವಾಗಿ ತನಿಖೆಯಾಗಬೇಕು.

ಇನ್ನು ಅವರ ಜೊತೆಯಲ್ಲಿ ಇಬ್ಬರು ಸ್ನೇಹಿತರು ಹೋಗಿದ್ದಾರೆ. ಸ್ನೇಹಿತರು ಜೊತೆಯಲ್ಲಿ ಹೋದವರು ಇವನ್ನೊಬ್ಬನನ್ನು ಒಂದು ರೂಮಿನಲ್ಲಿಟ್ಟು, ಅವರು ಇಬ್ಬರು ಒಂದು ರೂಮಿಗೆ ಹೋಗಿದ್ದು ಯಾಕೆ..? ಈ ರೀತಿ ಹಲವಾರು ರೀತಿಯ ಸಂಶಗಳು ಇವೆ. ಉಡುಪಿಗೆ ಯಾಕೆ ಹೋದರು..? ವಾಸ್ತವಾಂಶ ಏನಿದೆ ಅದನ್ನು ಜನತೆ ಮುಂದೆ ಇಡಲು ಸರ್ಕಾರ ಈ ಬಗ್ಗೆ ಅತ್ಯಂತ ಸಮರ್ಪಕವಾದಂತ ತನಿಖೆ ನಡೆಸಿ, ಇದರ ಸತ್ಯಾಸತ್ಯತೆಯನ್ನು ಜನೆಯೆ ಮುಂದೆ ಇಡಬೇಕು ಎಂದಿದ್ದಾರೆ.

suddionenews

Recent Posts

ವಿರಾಟ್ ಕೊಹ್ಲಿ ಸೂಪರ್ ಸೆಂಚುರಿ : ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದ ಭಾರತ

  ಸುದ್ದಿಒನ್ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ 51 ನೇ ಶತಕವನ್ನು ಗಳಿಸಿದರು. ಟೀಮ್ ಇಂಡಿಯಾ ಪಾಕಿಸ್ತಾನವನ್ನು 6…

8 minutes ago

ಕಬೀರಾನಂದಾಶ್ರಮಕ್ಕೆ ಯಾವುದೆ ಜಾತಿ, ಧರ್ಮ ಇಲ್ಲ, ಎಲ್ಲರೂ ಸಮಾನರು : ಡಾ.ಬಸವಕುಮಾರ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…

33 minutes ago

ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ : ವಿಶೇಷತೆ ಏನು ಗೊತ್ತಾ?

  ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…

1 hour ago

ವಿಜಯೇಂದ್ರ ನೇತೃತ್ವದಲ್ಲಿಯೇ ತಾಲೂಕು, ಜಿಲ್ಲಾ ಪಂಚಾಯತಿಗೆ ಸ್ಪರ್ಧೆ : ರೇಣುಕಾಚಾರ್ಯ

    ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…

1 hour ago

ತುಮಕೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 24 , 27 ಹಾಗೂ 28ರಂದು ವಿದ್ಯುತ್ ವ್ಯತ್ಯಯ…!

  ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…

2 hours ago

ಭಾರತ vs ಪಾಕಿಸ್ತಾನ : 25 ವರ್ಷಗಳ ಹಳೆಯ ದಾಖಲೆ ಮುರಿದ ಕಿಂಗ್ ಕೊಹ್ಲಿ

    ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…

2 hours ago