ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳಿಗೆ ತುಂಡುಡುಗೆಯನ್ನು ತೊಟ್ಟು ಹೋಗೋ ಅಭ್ಯಾಸ ಹಲವರಲ್ಲಿದೆ. ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ವಸ್ತ್ರ ಸಂಹಿತೆಗೆ ಒತ್ತಡ ಹಾಕ್ತಿವೆ.
![](https://suddione.com/content/uploads/2024/10/gifmaker_me-5-1.gif)
ಈಗಾಗ್ಲೇ ಕೇರಳದಲ್ಲಿ ದೇವಸ್ಥಾನಗಳಿಗೆ ಬರುವಾಗ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಹೀಗಾಗಿ ನಮ್ಮಲ್ಲೂ ಮಾಡಿ ಅಂತ ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ದಕ್ಷಿಣ ಕನ್ನಡ ಜಿಲ್ಲೆಗಳ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಗೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ, ಪೊಳಿಲಿ ರಾಜರಾಜೇಶ್ವರಿ ದೇವಸ್ಥಾನಗಳಲ್ಲಿ ಮನವಿ ಮಾಡಿಕೊಂಡಿರುವ ಬ್ಯಾನರ್ ಅಳವಡಿಸಲಾಗಿದೆ. ಹಿಂದೂ ಸಂಪ್ರದಾಯದಂತೆ ಉಡುಗೆ ತೊಟ್ಟು ಬನ್ನಿ ಎಂದು ಮನವಿ ಮಾಡಿದ್ದಾರೆ.
![](https://suddione.com/content/uploads/2025/01/shivasagar.webp)
![](https://suddione.com/content/uploads/2025/01/studio-11-2.webp)