Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಯಿಗಿರುವ ನಿಷ್ಠೆ ನರರಿಗಿಲ್ಲ :  ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ

Facebook
Twitter
Telegram
WhatsApp

ಬೆಂಗಳೂರು : ಕಲಿಯುಗದ ಮನುಷ್ಯನ ವರ್ತನೆ ಆಲೋಚನೆ ಅತ್ಯಂತ ಅಪಾಯಕಾರಿಯಾಗಿದೆ. ನಿಯತ್ತಿಲ್ಲದ  ನಿಯಂತ್ರಣವಿಲದ ನಿಲ್ಲುವುಗಳಿಂದ ನೀತಿ ಕೆಟ್ಟು ಕೇವಲ ಅಧಿಕಾರ ಹಣದ ಬೆನ್ನುಬಿದ್ದು ನೆಮ್ಮದಿಯಿಲ್ಲದ ಅತೃಪ್ತ ಮನುಷ್ಯನಾಗಿ ತನ್ನ ಸುತ್ತ ಮುತ್ತಲಿನ ಪರಿಸರ ಕೆಡಿಸಿ ತಾನು ಕೆಟ್ಟು ತನ್ನವರನ್ನು ದುಃಖದ ನದಿಗೆ ತಳ್ಳುತ್ತಿದ್ದಾನೆ ಎಂದು ಡಾ.ಶ್ರೀ ಶಾಂತವೀರ ಲಮಹಾಸ್ವಾಮೀಜಿ ಹೇಳಿದರು.

ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದಲ್ಲಿರುವ ಬ್ರಹ್ಮ ಚೈತನ್ಯ ಶೇಷಾವಧೂತರ ಆಶ್ರಮ ತಾತಪ್ಪನವರ ಗದ್ದುಗೆ ಮಠದಲ್ಲಿ ನಡೆದ 129ನೇ ಆರಾಧನೆ ಹಾಗೂ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಸಂಪತ್ತಿನಿಂದ ಸಂತೋಷ ಸಿಗುತ್ತದೆ ಆದರೆ ದಾನ ಧರ್ಮ ತ್ಯಾಗದಿಂದ ಸಂತೃಪ್ತಿ ಸಮಾಧಾನ ಪ್ರಾಪ್ತವಾಗುತ್ತದೆ ಆರಾಧನೆ ಜಾತ್ರೆಯಂತಹ ಧಾರ್ಮಿಕ ಸಮಾರಂಭಗಳ ಮೂಲಕ ಮಠಾಧೀಶರು ಶರಣ ಸಂತರು ಸಮಾದ ಸ್ವಸ್ಥ ಕಾಪಾಡುವ ಕಾಯಕವನ್ನು ನಿರಂತರವಾಗಿ ಮಾಡುತ್ತಿರುವುದರಿಂದ ಸಮಾಜದಲ್ಲಿ ಸಾಮರಸ್ಯ ಸೌಹಾರ್ದ ಮನೋಭಾವನೆಯಿಂದ ಜನರು ಬದುಕಿ ಸಂಸ್ಕಾರ ಸಂಸ್ಕೃತಿ ಪಡೆಯುತ್ತಿದ್ದಾರೆ ಆದರೆ ರಾಜರ ಕಾಲದಲ್ಲಿ ರಾಜರಿಗೆ ಮಾರ್ಗದರ್ಶನ ಪಡೆಯಲು ರಾಜಗುರುಗಳನ್ನು ಅವಲಂಬಿಸಿದ್ದರು ಇವತ್ತಿನ ರಾಜಕಾರಣಿಗಳು ಗುರುಗಳ ಮಾರ್ಗದರ್ಶನ ಪಡೆಯದಿರುವುದೆ ಸಮಾಜದಲ್ಲಿ ಗೊಂದಲ ಸಮಸ್ಯೆಗಳಿಗೆ ಕಾರಣವಾಗಿದೆ ಅಧಿಕಾರದ ದರ್ಪದ ಅಲೋಚನೆಯಿಂದ ಉತ್ತಮ ಚಿಂತನೆ ಹೊರಹೊಮ್ಮುವುದಿಲ್ಲ ಆದ್ಯಾತ್ಮೀಕ ಆದರ್ಶ ಚಿಂತನೆಯಿಂದ   ಉತ್ತಮ ಸಮಾಜ ಕಟ್ಟಲು ಸಾಧ್ಯ ಪ್ರಸ್ತುತ ಆನೇಕ ಸಮಸ್ಯೆಗಳಿಗೆ ಗುರುವಿನ ಆಶೀರ್ವಾದ ಆಶೀರ್ವಚನ ಮಾರ್ಗದರ್ಶನ ಅತ್ಯಗತ್ಯ ಎಂದರು.

ಸಮಾರಂಭದಲ್ಲಿ ಶೇಷಾವಧೂತರ ಆಶ್ರಮ ಟ್ರಸ್ಟಿನ ಪದಾಧಿಕಾರಿಗಳು ತ್ಯಾಮಗೊಂಡ್ಲು ಸುತ್ತ ಮುತ್ತಲಿನ ಗ್ರಾಮಗಳ ಭಕ್ತವೃಂದ ಭಾಗವಹಿಸಿದ್ದರು.

ಆರಾಧನಾ ಮಹೋತ್ಸವ ನಿಮಿತ್ತ ಬೆಳಿಗ್ಗೆಯಿಂದ ಭಜನೆ ಕೀರ್ತನೆ ಪ್ರಸಾದ ಅನ್ನ ಸಂತರ್ಪಣೆ  ಆಯೋಜಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!