ಯಾರು, ಯಾವಾಗ, ಎಲ್ಲಿರ್ತಾರೆ ಗೊತ್ತಿಲ್ಲ : ಹೆಚ್ ಡಿ ಕುಮಾರಸ್ವಾಮಿ

suddionenews
1 Min Read

ಬೆಂಗಳೂರು: ಸಚಿವ ಆನಂದ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದು, ಯಾರು, ಯಾವಾಗ, ಎಲ್ಲಿ ಇರ್ತಾರೆ ಅನ್ನೋದೆ ಗೊತ್ತಾಗಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಅವರು, ಇವತ್ತಿನ ರಾಜಕೀಯ ನಾಯಕರಲ್ಲಿ‌ ನಿಷ್ಠೆ ಇಲ್ಲ. ಯಾರು ಯಾವಾಗ ಯಾವ ಪಕ್ಷಕ್ಕೆ ಹೋಗ್ತಾರೆ ಅನ್ನೋದು ಗೊತ್ತಿಲ್ಲ. ಯಾಕೆ ಭೇಟಿ ಮಾಡ್ತಾರೆ ಅನ್ನೋದು ಗೊತ್ತಿಲ್ಲ. ಈಗ ನೋಡಿ ಉತ್ತರಪ್ರದೇಶ, ಗೋವಾ, ಪಂಜಾಬ್ ನಲ್ಲಿ ಚುನಾವಣೆ ನಡೀತಾ ಇದೆ. ಆದ್ರೆ ಬೆಳಗ್ಗೆ ಒಂದು ಪಕ್ಷದಲ್ಲಿದ್ದವರು. ಮಧ್ಯಾಹ್ನ ಆ ಪಕ್ಷದಲ್ಲೇ ಇರಲ್ಲ.

ಅವರಿಗೆ ವೈಯಕ್ತಿಕ ಸ್ಥಾನಮಾನ ಏನು ಸಿಗುತ್ತೆ ಅನ್ನೋನ್ನಷ್ಟೇ ನೋಡ್ತಾರೆ. ಪಕ್ಷ ಸಂಘಟನೆ, ರಾಜ್ಯದ ಒಳಿತಿಗಾಗಿ ದುಡಿತಾರೆ ಅನ್ನೋದು ಕಡಿಮೆಯಾಗಿದೆ. ನೋಡೋಣಾ ಮುಂದೆ ಏನೆಲ್ಲಾ ಬದಲಾವಣೆ ಆಗುತ್ತೆ ಅಂತ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *