ದಾವಣಗೆರೆ; ಹೊನ್ನಾಳಿಯ ರೇಣುಕಾಚಾರ್ಯ ಅವರು ಮತ್ತೊಮ್ಮೆ ಯತ್ನಾಳ್ ವಿರುದ್ದ ಹರಿಹಾಯ್ದಿದ್ದಾರೆ. ಬಲಿಪಶು ಮಾಡ್ತಾರೆ, ಬಲಿಪಶು ಆಗೋದು ಬೇಡ, ಕೇಂದ್ರ ಸಚಿವರಾಗಿದ್ದಂತವರು ಅನ್ನೋದು ನನ್ನ ವಿನಂತಿ. ಯತ್ನಾಳ್ ಗೆ ನಾವೇನು ಶತ್ರುಗಳಲ್ಲ ಎಂದಿದ್ದಾರೆ.
ಇದೆ ವೇಳೆ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾತನಾಡಿದ್ದು, ನಾನೇನಾದ್ರೂ ಬೇರೆ ಸಮುದಾಯದ ಜಂಗಮದ ಸರ್ಟಿಫಿಕೇಟ್ ತೆಗೆದುಕೊಂಡಿದ್ದರೆ, ನಾನು ಮಾಧ್ಯಮದವರ ಮುಂದೆ ಹೇಳ್ತೀನಿ……. ಅದನ್ನೇ ಅಸೆಂಬ್ಲಿ ಒಳಗೆ ಹೇಳುತ್ತೀನಿ. ನನ್ನ ಜಾತಿ ಕಾಲಂನಲ್ಲಿ ಹಿಂದೂ ಲಿಂಗಾಯತ್ ಅಂತ ನಮ್ಮ ತಂದೆ ತಾಯಿ ಬರೆಸಿದ್ದರು. ವೀರಶೈವ ಲಿಂಗಾಯತ ಅಂತ ಬರೆಸಿದ್ದೀನಿ. ಆ ದಾಖಲೆಯನ್ನ 16ನೇ ತಾರೀಖು ರಿಲೀಸ್ ಮಾಡ್ತೇನೆ. ನಾನು ಯಾವುದೇ ಕಾರಣಕ್ಕೂ ಜಾತಿ ಸರ್ಟಿಫಿಕೇಟ್ ತೆಗೆದುಕೊಂಡಿಲ್ಲ. ಅವತ್ತು ಇದೇ ಸಿದ್ದರಾಮಯ್ಯನವರು, ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರು ಬೇರೆ ಜಂಗಮ, ಅದ್ಯಾರೋ ಚೇತನ್ ಎಂಬ ವ್ಯಕ್ತಿಗೆ 25 ಲಕ್ಷ ಕೊಟ್ಟಿದ್ದಾರೆ. ಅದು ನಂಗೆ ಗೊತ್ತಿಲ್ಲ.
ಆದ್ರೆ ಕಾಂಗ್ರೆಸ್ನ ಒಬ್ಬ ಮುಖ್ಯಸ್ಥ ಮೈಸೂರಿನಲ್ಲಿ ಪ್ರೆಸ್ ಮೀಟ್ ಮಾಡಿದ್ದಾರೆ. ರೇಣುಕಾಚಾರ್ಯ ಮಗಳಿಗೆ 25 ಲಕ್ಷ ಹಣ ತೆಗೆದುಕೊಂಡಿದ್ದಾರೆ ಸರ್ಟಿಫಿಕೇಟ್ಗೆ ಅಂತ. ನಾನು ಅಂದು ಹೇಳಿದ್ದೆ, ಚೇತನಾ ಅಂದ್ರೆ ಹುಡುಗ. ವಿದ್ಯಾರ್ಥಿಗೆ ತೆಗೆದುಕೊಂಡಿರೋದು. ನನ್ನ ಮಗಳಿಗೆ ಅದನ್ನ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾರು ನಮ್ಮ ಸಮುದಾಯದ ಬಡವರಿದ್ದಾರಲ್ಲ, ಬರೀ ಜಂಗಮ ಅಂತಲ್ಲ. ಇಡೀ ವೀರಶೈವ ಸಮುದಾಯದಿಂದ ಬಡವರಿಗೆ ಮೀಸಲಾತಿ ಸಿಗಬೇಕು ಎಂಬುದೇ ನಮ್ಮ ಉದ್ದೇಶ. ನನ್ನ ಜಾತಿಯನ್ನ ವೀರಶೈವ ಲಿಂಗಾಯತ ಅಂತ ಬರೆಸಿದ್ದೀನಿ. ಅದರ ದಾಖಲೆಗಳನ್ನ 16ನೇ ತಾರೀಖು ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…
ಸುದ್ದಿಒನ್, ಜಗಳೂರು, ಮಾರ್ಚ್. 14 : ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ದೊಣ್ಣೆಹಳ್ಳಿ, ಸರ್ಕಾರಿ ದಂತ ಕಾಲೇಜು…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ಚಿತ್ರದುರ್ಗ. ಮಾ.14: ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಇದೇ ಮಾರ್ಚ್ 16 ರಂದು ಭಾನುವಾರ…
ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 14: ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)…