7 ದಿನಕ್ಕೆ 70 ಕೊಠಡಿಗಳು, ಆಹಾರಕ್ಕಾಗಿ ಏಕನಾಥ್ ಶಿಂಧೆ ಖರ್ಚು ಮಾಡಿರುವುದು ಎಷ್ಟು ಕೋಟಿ ಗೊತ್ತಾ..?

ಮುಂಬೈ: ಸದ್ಯ ಮಹಾರಾಷ್ಟ್ರ ರಾಜಕಾರಣದಲ್ಲಿ ನಿರೀಕ್ಷಿಸದ್ದೆಲ್ಲವೂ ನಡೆಯುತ್ತಿದೆ. ಶಿವಸೇನೆ ಸರ್ಕಾರ ಉರುಳುವ ಎಲ್ಲಾ ಲಕ್ಷಣಗಳು ಸಾಬೀತಾಗುತ್ತಿದೆ. ಸದ್ಯಕ್ಕೆ ಇಲ್ಲಿ ಶಿವಸೇನೆಯ 42 ಶಾಸಕರು ಬೀಡು ಬಿಟ್ಟಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ-ಸರ್ಕಾರವು ಬಹುತೇಕ ಪತನದ ಅಂಚಿನಲ್ಲಿದೆ. ಬಂಡಾಯವೆಂದ ಲೋಕನಾಥ್ ಶಿಂಧೆ ಶಾಸಕರು ಮತ್ತು ಸಂಸದರ ಜೊತೆಗೆ ಗುವಾಹಟಿಯ ‘ರಾಡಿಸನ್ ಬ್ಲೂ’ನಲ್ಲಿ ತಂಗಿದ್ದಾರೆ. ಈಗ ಏಳು ದಿನಗಳ ವಾಸ್ತವ್ಯವಾಗಿದೆ. ಈ ಏಳು ದಿನದಲ್ಲಿ ಅವರ ಖರ್ಚು ವೆಚ್ಚ ಕೇಳಿದರೆ ಶಾಕ್ ಆಗುತ್ತೀರಿ.

ಮೂಲಗಳ ಪ್ರಕಾರ, ಏಳು ದಿನಗಳ ಕಾಲ ಹೋಟೆಲ್‌ನ 70 ಕೊಠಡಿಗಳನ್ನು ‘ಬುಕ್’ ಮಾಡಲಾಗಿದೆ. ಆದರೆ ಆ ಬುಕ್ಕಿಂಗ್ ಯಾರು ಮಾಡಿದ್ದಾರೆ, ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸದನದಲ್ಲಿ ಶಿವಸೇನೆ ಮತ್ತು ಪಕ್ಷೇತರರು ಸೇರಿ ಸುಮಾರು 55 ಶಾಸಕರಿದ್ದಾರೆ. ಏಳು ದಿನಗಳ ಕಾಲ ಹೋಟೆಲ್ ಬಾಡಿಗೆಗೆ 56 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಮೂಲಗಳು ಹೇಳಿವೆ.

ಇದಲ್ಲದೇ ಊಟ ಸೇರಿದಂತೆ ಇತರೆ ಖರ್ಚು ದಿನಕ್ಕೆ 8 ಲಕ್ಷ ರೂ. ಅಂದರೆ, ಏಳು ದಿನ ಸೇರಿ ಒಂದು ಕೋಟಿ 12 ಲಕ್ಷ ರೂ. ಇದಕ್ಕೆ ಚಾರ್ಟರ್ಡ್ ಫ್ಲೈಟ್‌ಗಳ ವೆಚ್ಚ, ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಕಾರು ದರವನ್ನು ಸೇರಿಸಲಾಗುತ್ತದೆ. ಹೆಚ್ಚುವರಿಯಾಗಿ, ಇತರ ವೆಚ್ಚಗಳಿವೆ.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

48 minutes ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

1 hour ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

4 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago