Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿಯೇ : ಬಿಎಸ್ವೈ, ಅಶೋಕ್ ಹೇಳಿಕೆಗೆ ಡಿಕೆಶಿ ತಿರುಗೇಟು

Facebook
Twitter
Telegram
WhatsApp

 

ಬೆಂಗಳೂರು: ಅಶೋಕ್ ಗೆ, ಯಡಿಯೂರಪ್ಪ ಇಬ್ಬರಿಗೂ ನಮ್ಮ ಕಡೆ ಗಾದೆ ಮಾತಿದೆ. ಕಾಮಾಲೆ ರೋಗದವರಿಗೆಲ್ಲಾ ಹಳದಿಯೇ ಕಾಣುವುದಂತೆ. ಏನೇ ಆದರೂ ಎಲ್ಲವೂ ಕಾಂಗ್ರೆಸ್ ಮೇಲೆ ಹಾಕುವುದು ಅಂತ. ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅವರು ಪೊಲೀಸರ ಮೇಲೆ ಮನವಿ ಮೇಲೆ ಹೋಗಿ, ಗಾಡಿ ಮೇಲೆ ನಿಂತುಕೊಳ್ಳುವುದಕ್ಕೆ ಆಗುತ್ತಾ..? ಪೊಲೀಸ್ ಜೀಪ್ ಮೇಲೆ ನಿಂತು ಮೈಕ್ ಹಿಡಿದುಕೊಳ್ಳೋದಕ್ಕೆ ಆಗುತ್ತಾ..? ಯಾರ ಮೈಕ್, ಯಾರು ಕರೆದರು. ಅವರು ಶಾಂತಿ ಮಾಡಲಿಕ್ಕೆ ಮನವಿ ಮಾಡಲು ಹೋಗಿದ್ದರು. ಅವರಿಗು ಕಲ್ಲಲ್ಲಿ ಹೊಡೆದವರೆ, ಅವರಿಗೂ ಕೈ ಫ್ರಾಕ್ಚರ್ ಆಗಿದೆ. ಬೆನ್ನಿಗೆ ಏಟು ಬಿದ್ದಿದೆ, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ರು. ಹೊರಗೆ ಈಗ ಬಂದಿದ್ದಾರೆ.

ಕಾಂಗ್ರೆಸ್ ನವರು ಮಾಡಿದ್ದಾರೆ ಎಂದರೆ ಅರೆಸ್ಟಗ ಮಾಡಲಿ. ಪ್ರತಿಯೊಂದಕ್ಕು ಹೇಳುತ್ತಾರಲ್ಲ ಒದ್ದು ಒಳಗೆ ಹಾಕಬೇಕು ಅಂತ ಹಾಕಲಿ. ನಿನ್ನೆ ನಾನೇ ಪೊಲೀಸ್ ಕಮಿಷನರ್ ಬಳಿ ಹೋಗಿ ಭೇಟಿ ಮಾಡಿದ್ದೀನಿ, ವಾಸ್ತವಾಂಶ ಕೇಳಿದ್ದೀನಿ. ಮಾರೆಲ್ ಪೊಲೀಸರನ್ನ ಕೈಗೆ ತೆಗೆದುಕೊಂಡರೆ ನಾವ್ಯಾರು ಸಹಿಸಲ್ಲ. ಅದೇ ಸರ್ಕಾರದಲ್ಲಿ ಮಾರೆಲ್ ಪೊಲೀಸ್ ಮೊಟಕು ಮಾಡಿದ್ದರೆ ರಾಜ್ಯದಲ್ಲಿ ಇಂಥ ಸ್ಥಿತಿ ಬರುತ್ತಿರಲಿಲ್ಲ. ಅಶೋಕ್ ಮಾತನಾಡುತ್ತಾರೆ, ಯಡಿಯೂರಪ್ಪ ಅವರು ಮಾತನಾಡುತ್ತಾರೆ ಅಂತ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ. ಈ ರಾಜ್ಯದಲ್ಲಿ ಕಾನೂನು ಇದೆ. ಕಾನೂನು ಪ್ರಕಾರ ಮಾಡಲಿ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಯಾಕೆ ರಾಘವೇಂದ್ರ, ಈಶ್ವರಪ್ಪ ಮೇಲೆ ಕೇಸ್ ಹಾಕಲಿಲ್ಲ. ಸುಮ್ಮನೆ ನಮ್ಮ ಮೇಲೆಲ್ಲಾ ಕೇಸ್ ಹಾಕಿ ನಮ್ಮನ್ನೆಲ್ಲಾ ಜೈಲಿಗೆ ಕಳುಹಿಸಬೇಕೆಂದವ್ರೆ. ಇದು ಫಸ್ಟ್ ಡ್ಯೂಟಿ. ಮೊದಲು ತಮ್ಮ ಮೂತಿಯನ್ನು ಒರೆಸಿಕೊಳ್ಳಲಿ. ಸ್ವಾಮೀಜಿಯವರು ಬಹಳ ವಿಚಾರವಂತರಿದ್ದಾರೆ, ವಿದ್ಯಾವಂತರಿದ್ದಾರೆ, ಪ್ರಜ್ಞಾವಂತರಿದ್ದಾರೆ. ನಾನು ಕೂಡ ಸಾಕಷ್ಟು ಸ್ವಾಮೀಜಿಗಳ ಬಳಿ ಮಾತನಾಡಿದ್ದೀನಿ. ಅವರ ಹೆಸರನ್ನೆಲ್ಲಾ ಬಯಲು ಮಾಡಲು ಆಗಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!