ಬೆಂಗಳೂರು: ಕನಕಪುರ ಕ್ಷೇತ್ರ ಮೊದಲಿನಿಂದಾನು ಡಿಕೆ ಶಿವಕುಮಾರ್ ಗೆ ಪ್ರತಿಷ್ಠೆಯ ಕಣವಾಗಿದೆ. ಆದ್ರೆ ಈ ಬಾರಿ ಕನಕಪುರದ ಮೇಲೆ ವಿರೋಧ ಪಕ್ಷದವರ ಕಣ್ಣು ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿಯ ಎದುರು ಸ್ಟ್ರಾಂಗ್ ಅಭ್ಯರ್ಥಿಯನ್ನು ಜೆಡಿಎಸ್ ಪಕ್ಷದಿಂದ ನಿಲ್ಲಿಸುವ ಪ್ಲ್ಯಾನ್ ಇದೆ. ಆದರೆ ಆ ಅಭ್ಯರ್ಥಿಯನ್ನೇ ತಮ್ಮ ಪಕ್ಷಕ್ಕೆ ಸೆಳೆದಿದ್ದು, ಸದ್ಯ ಕನಕಪುರದಲ್ಲಿ ಎದುರಾಳಿಯನ್ನು ಇಲ್ಲದಂತೆ ಮಾಡಿಕೊಂಡಿದ್ದಾರೆ ಡಿಕೆ ಶಿವಕುಮಾರ್.
ಕನಕಪುರದ ಜೆಡಿಎಸ್ ಪ್ರಬಲ ನಾಯಕ ದುಂತೂರು ವಿಶ್ ನಾಥ್ ಅವರನ್ನು ಕಾಂಗ್ರೆಸ್ ಗೆ ಸೆಳೆಯುವ ಪ್ಲ್ಯಾನ್ ಸಕ್ಸಸ್ ಆಗಿದೆ. ನಾಳೆ ಅಂದ್ರೆ ಜನವರಿ 9ರಂದು ‘ನಮ್ಮ ನಡೆ ಕಾಂಗ್ರೆದ್ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ದುಂತೂರು ವಿಶ್ವನಾಥ್ ಕಾಂಗ್ರೆಸ್ ಸೇರಲಿದ್ದಾರೆ. ಬಿಜೆಪಿ ಸೇರುವ ಪ್ಲ್ಯಾನ್ ನಲ್ಲಿದ್ದ ದುಂತೂರು ವಿಶ್ವನಾಥ್ ಕೊನೆಗಳಿಗೆಯಲ್ಲಿ ಮನಸ್ಸು ಬದಲಾಯಿಸಿದ್ದಾರೆ. ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ.
ದುಂತೂರು ವಿಶ್ವನಾಥ್ ಕಾಂಗ್ರೆಸ್ ಸೇರುವುದರಿಂದ ಸಾಕಷ್ಟು ಪ್ಲಸ್ ಪಾಯಿಂಟ್ ಇದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್, ಡಿಕೆ ಶಿವಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. 47,643 ಮತ ಪಡೆದಿದ್ದರು. ಆದ್ರೆ ಅಂತಿಮವಾಗಿ ಡಿಕೆ ಶಿವಕುಮಾರ್ ಗೆಲುವನ್ನ ಸಾಧಿಸಿದ್ದರು. ಹೀಗೆ ನೆಕ್ ಟು ನೆಕ್ ಫೈಟ್ ಕೊಟ್ಟಿದ್ದ ವಿಶ್ವನಾಥ್ ಕಾಂಗ್ರೆಸ್ ನಲ್ಲಿದ್ದರೆ, ಸಂಪೂರ್ಣ ಮತ ಕಾಂಗ್ರೆಸ್ ಪಾಲಾಗಲಿದೆ, ಕನಕಪುರ ಗೆಲುವು ಸುಲಭವಾಗಲಿದೆ.