ಹಾರ ಹಾಕಿದ್ದ ಪೈನಾಪಲ್ ಅನ್ನೇ ಕಿತ್ತು ತಿಂದ ಡಿಕೆ ಶಿವಕುಮಾರ್..!

suddionenews
1 Min Read

ಮಂಡ್ಯ: ರಾಜಕಾರಣಿಗಳು ಯಾವಾಗಲೂ ಸೀರಿಯಸ್ ಅಲ್ಲ. ಮಾತನ್ನು ಸೀರಿಯಸ್ ಆಗಿ ಆಡುತ್ತಾರೆ, ವಾಗ್ದಾಳಿಯನ್ನು ಸೀರಿಯಸ್ ಆಗಿ ಮಾಡುತ್ತಾರೆ. ಆದರೆ ಇವರ ನಡುವೆಯೂ ಆಗಾಗ ಫನ್ ಮೂಮೆಂಟ್ ನಡೆಯುತ್ತದೆ. ಅಂಥದ್ದೊಂದು ಘಟನೆ ಇಂದು ಮಂಡ್ಯದಲ್ಲಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಹಾಕಿದ್ದ ಹಾರದಲ್ಲಿನ ಹಣ್ಣನ್ನೇ ಕಿತ್ತು ತಿಂದಿರುವ ಸನ್ನಿವೇಶ ಕಂಡು ಬಂದಿದೆ.

ಸದ್ಯ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಾಂಗ್ರೆಸ್ ಕೂಡ ಪ್ರಜಾಧ್ವನಿ ಎಂಬ ಕಾರ್ಯಕ್ರಮದಡಿ ಜನರ ಬಳಿ ತಲುಪುತ್ತಿದೆ. ಇಂದು ಮಂಡ್ಯದಲ್ಲಿ ರ್ಯಾಲಿ ನಡೆದಿದೆ. ಈ ವೇಳೆ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿದ್ದರು. ಈ ವೇಳೆ ಅಭಿಮಾನಿಗಳೆಲ್ಲಾ ಕಾಂಗ್ರೆಸ್ ನಾಯಕರಿಗೆ ಪೈನಾಪಲ್ ಹಾರವನ್ನು ಹಾಕಿದರು.

ಹಾರ ತುಂಬಾ ದೊಡ್ಡದಾಗಿತ್ತು. ಹೀಗಾಗಿ ಜೆಸಿಬಿ ಮೂಲಕ ಹಾರವನ್ನು ಹಾಕಲಾಗಿತ್ತು. ಈ ವೇಳೆ ಹಾರದಿಂದಾನೇ ಡಿಕೆಶಿ ಪಕ್ಕದಲ್ಲಿ ಇದ್ದ ಒಬ್ಬರು ಹಣ್ಣನ್ನು ಕಿತ್ತುಕೊಟ್ಟರು. ಆ ಹಣ್ಣನ್ನು ಡಿಕೆ ಶಿವಕುಮಾರ್ ಕೈನಲ್ಲಿಯೇ ಎರಡು ಭಾಗ ಮಾಡಿ, ತಿಂದರು. ಜೊತೆಗೆ ಪಕ್ಕದಲ್ಲಿಯೂ ಇದ್ದವರಿಗೂ ನೀಡಿದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *