ಇಡೀ ಪ್ರಕರಣವನ್ನು ದೇಶದ ಜನ ನೋಡಿದ್ದಾರೆ : ಗೋದ್ರಾ ಕೇಸ್ ನಲ್ಲಿ ಪ್ರಧಾನಿಗೆ ಕ್ಲೀನ್ ಚಿಟ್ ಬಗ್ಗೆ ಧರ್ಮಸೇನಾ ಪ್ರತಿಕ್ರಿಯೆ

suddionenews
1 Min Read

 

ಬೆಂಗಳೂರು: ಸಿದ್ದರಾಮಯ್ಯ, ಡಿಕೆಶಿ ನಮ್ಮ ನಾಯಕರು. ಅದನ್ನು ರಾಜ್ಯದ ಜನರೇ ಒಪ್ಪಿಕೊಂಡಿದ್ದಾರೆ. ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಿದ್ದೀರಾ..? ಸುಳ್ಳು ಅಟ್ರಾಸಿಟಿ ಹಾಕೋದನ್ನ ಬಿಡಿ ಎಂದು ಛಲವಾದಿ ನಾರಾಯಣಸ್ವಾಮಿ ಅವರಿಗೆ ಕೆಪಿಸಿಸಿ ಎಸ್ಸಿ ಘಟಕದ ಧರ್ಮಸೇನಾ ಟಾಂಗ್ ಕೊಟ್ಟಿದ್ದಾರೆ.

ನೀವು ಬಸವಲಿಂಗಪ್ಪನಂತರಂತಾಗಿ. ನಿಮ್ಮ ಪಕ್ಷದ ಚೀ.ನಾ.ರಾಮು ನಿಮ್ಮನ್ನ ಒಪ್ಪಲ್ಲ. ನಾವು ಆರ್ ಎಸ್ ಎಸ್ ಚಡ್ಡಿ ಎಳೆದಿದ್ದೆವು. ನೀವು ಆರ್ ಎಸ್ ಎಸ್ ನವರ ಒಳ ಉಡುಪನ್ನೆ ಹೊತ್ತು ತಂದ್ರಿ. ನಮ್ಮ ಸಮುದಾಯಕ್ಕೆ ಎಷ್ಟು ನೋವಾಗಿರಬೇಡ ಎಂದು ಛಲವಾದಿ ವಿರುದ್ಧ ಧರ್ಮಸೇನಾ ವಾಗ್ದಾಳಿ ನಡೆಸಿದ್ದಾರೆ.

ಛಲವಾದಿ ಅಟ್ರಾಸಿಟಿ ಕೇಸ್ ಹಾಕಲು ಬರಲ್ಲ. ನೀವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದೀರ. ಮತ್ತೆ ನೀವು ದಲಿತ ಸಮುದಾಯಕ್ಕೆ ವಾಪಸ್ ಬನ್ನಿ. ಆಗ ಬೇಕಾದರೆ ಕೇಸ್ ಹಾಕಬಹುದು ಎಂದಿದ್ದಾರೆ.

ಗೋದ್ರಾ ಹತ್ಯಾಕಾಂಡದಲ್ಲಿ ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ವಿಚಾರವಾಗಿ ಮಾತನಾಡಿದ್ದು, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇಸ್ ಬಿದ್ದಿರಬಹುದು. ಕೋರ್ಟ್ ತೀರ್ಪನ್ನ ನಾವು ಒಪ್ಪಿಕೊಳ್ಳಬೇಕು. ಆದರೆ ಇಡೀ ಪ್ರಕರಣವನ್ನ ದೇಶದ ಜನ ನೋಡಿದ್ದಾರೆ. ಏನಾಯ್ತು,ಯಾರಿದ್ರು ಎಲ್ಲವನ್ನ ನೋಡಿದ್ದಾರೆ. ಹಾಗಾಗಿ ಬೇರೇನೂ‌ ಹೇಳುವುದು ಬೇಡ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *