Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಜೆಪಿ ನಾಯಕಿಯ ಭಾಷಣಕ್ಕೆ ಸಿ ಟಿ ರವಿ ಕೊಟ್ಟ ಸ್ಪಷ್ಟನೆ ಹೀಗಿದೆ…!

Facebook
Twitter
Telegram
WhatsApp

ಬೆಳಗಾವಿ: ಬಿಜೆಪಿ ನಾಯಕಿ ಪ್ರವಾದಿ ಮುಹಮ್ಮದ್ ಗೆ ಅವಮಾನ ಮಾಡಿದ್ದಾರೆ ಎಂಬ ವಿಚಾರ ಬಾರಿ ಸುದ್ದಿಯಾಗಿತ್ತು. ಈ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಪಕ್ಷದ ಒಳಗೆಯೇ ಗೊಂದಲ ಇದೆ ಎಂಬ ಹೇಳಿಕೆ ಸುಳ್ಳು.

ಹೇಳಿಕೆಗಳಲ್ಲಿ ವ್ಯತ್ಯಾಸವಾದರೆ ತಕ್ಷಣ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದೆ. ಯಾರನ್ನು ಉಚ್ಛಾಟನೆ ಮಾಡಬೇಕೋ ಅವರನ್ನು ಮಾಡಿದೆ. ಪಕ್ಷದ ನೀತಿ ನಿಯಮಗಳನ್ನು ಸಹ ಸ್ಪಷ್ಟವಾಗಿ ಪತ್ರಿಕಾ ಹೇಳಿಕೆಯ ಮೂಲಕ ಕೊಟ್ಟಿದ್ದೇವೆ. ಅಲ್ಲಿಗೆ ಅದು ಮುಗಿದಿದೆ.

ಯಾರೇ ಹೇಳಿಕೆ ಕೊಟ್ಟಿದ್ದರು ಇಂಥ ಹೇಳಿಕೆಗಳನ್ನು ನೀಡಬಾರದು ಎಂಬುದನ್ನು ಹೇಳಿದೆ. ನಾವೂ ಎಲ್ಲಾ ಧರ್ಮಗಳನ್ನು ಗೌರವಿಸುತ್ತೆ. ಒಂದು ಹಿಂದೂ ವಿಚಾರಧಾರೆಗೆ ಬದ್ಧ ಬಿಜೆಪಿ. ಸರ್ವೇ ಜನಾಂಗ ಸುಖಿನೋಭವಾಂತು ಎಂಬ ಕಲ್ಪನೆ ಇರುವಂತ ಹಿಂದೂ ವಿಚಾರಾಧಾರೆಯಡಿ, ಪ್ರತಿಯೊಂದು ಧರ್ಮವನ್ನು ಪ್ರೀತಿಸುವ, ಗೌರವಿಸುವಂತದ್ದು ಈ ದೇಶದಲ್ಲಿದೆ.  ನಮ್ಮ ಪಾರ್ಟಿ ಮತ್ತು ಸರ್ಕಾರ ನಡೆಯುತ್ತದೆ.

ಭಾರತದ ಸಂವಿಧಾನದಡಿಯಲ್ಲಿ ಬರುವಂತದ್ದನ್ನು ಮೀರಿ ಯಾರಾದರೂ ವರ್ತಿಸಿದರೆ, ಅದನ್ನು ಪಾರ್ಟಿ ಸಹಿಸಿಕೊಳ್ಳುವುದಿಲ್ಲ. ಅಂತಹವರ ವಿರುದ್ಧ ಪಾರ್ಟಿ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಪಾರ್ಟಿಯೂ ನಿನ್ನೆ ಒಂದು ಸಂದೇಶ ನೀಡಿದೆ. ಯಾರು ಅದನ್ನು ಉಲ್ಲಂಘನೆ ಮಾಡುವಂತಿಲ್ಲ‌.ಇಂದು ಅಂತರಾಷ್ಟ್ರೀಯ ಮಟ್ಟದಲ್ಲಾದಂತ ವಿಚಾರಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಏನು ಮಾಡಬೇಕು ಎಂಬುದನ್ನು ಯೋಚಿಸುತ್ತದೆ.

ಎಲ್ಲದು ಶಮನ ಆಗುತ್ತದೆ. ಒಂದು ಅಥವಾ ಎರಡು ದಿವಸದಲ್ಲಿ ಶಮನವಾಗುತ್ತದೆ. ನಮ್ಮ ವಿದೇಶಾಂಗ ಸಚಿವರು ನಿಯಂತ್ರಿಸುತ್ತಾರೆ. ಬಾಕಿ ಉಳಿದ ದೇಶಗಳಿಗೆ ಏನು ಸಂದೇಶ ಕೊಡಬೇಕೋ ಅದನ್ನು ಕೊಡುತ್ತದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಜಿಲ್ಲಾ ವಕೀಲರಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಚಾಲನೆ

  ಚಿತ್ರದುರ್ಗ, ಮಾರ್ಚ್. 29 : ಚಿತ್ರದುರ್ಗ ಜಿಲ್ಲಾ ವಕೀಲರ ಕಲಾ ಬಳಗದಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅಕ್ಟೋಬರ್ 13, 2024 ರಂದು ಮದಕರಿ ನಾಯಕ ಜಯಂತಿ ಅಂಗವಾಗಿ

ನನ್ನ ರಾಜಕೀಯ ಶಕ್ತಿ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆ : ಶಾಸಕ ಎಂ.ಚಂದ್ರಪ್ಪ ಸವಾಲು

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.29  : ನನ್ನ ಮಗ ಏನು ತಪ್ಪು ಮಾಡಿದ್ದಾ ಅಂತ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೇಟ್

BMTCಯಲ್ಲಿ 2,500 ಹುದ್ದೆಗಳು ಖಾಲಿ : ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2,500 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಅರ್ಜಿ ಆಹ್ವಾನ ಮಾಡಿ, ನೋಟಿಫೀಕೇಷನ್ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ cetonline.karnataka.gov.inಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಹಾಕುವವರು ದ್ವಿತೀಯ

error: Content is protected !!