ಕೋರ್ಟ್ ನಿರ್ಬಂಧ ಸಡಿಲಿಕೆ ; ಊರಿಗೆ ಬಂದ ಭವಾನಿ ರೇವಣ್ಣರಿಗೆ ಹೂವಿನ ಸ್ವಾಗತ.. ನನಗೆ ಮುಜುಗರವಾಗುತ್ತೆ ಅಂದಿದ್ಯಾಕೆ ದೊಡ್ಡಗೌಡ್ರ ಸೊಸೆ..?

ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು ಖುಷಿಯಿಂದ ಬರ ಮಾಡಿಕೊಂಡಿದ್ದಾರೆ. ಇಷ್ಟು ದಿನ ಹೊಳೆನರಸೀಪುರಕ್ಕೆ ಕೋರ್ಟ್ ಭವಾನಿ ಅವರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಇದೀಗ ಶುಕ್ರವಾರ ಆ ನಿರ್ಬಂಧವನ್ನು ತೆರವುಗೊಳಿಸಿದೆ. ಹೀಗಾಗಿ ತಮ್ಮ ಸ್ವಗೃಹಕ್ಕೆ ಹೋಗಿದ್ದಾರೆ.

ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ನಾನು ಬರ್ತಿರೋ ವಿಚಾರವನ್ನ ಯಾರಿಗೂ ತಿಳಿಸಿರಲಿಲ್ಲ. ಆದರೂ ಸಾಕಷ್ಡು ಜನ ಬಂದಿದ್ದಾರೆ. ಶುಕ್ರವಾರ ನನಗೆ ಕೋರ್ಟ್ ನಿಂದ ರಿಲ್ಯಾಕ್ಸ್ ಸಿಕ್ಕಿದ ಬಳಿಕ ಸಾಕಷ್ಟು ಜನ ಫೋನ್ ಮಾಡಿದ್ದರು. ಆದರೂ ಬರುವ ವಿಚಾರ ಯಾರಿಗೂ ತಿಳಿಸಿರಲಿಲ್ಲ. ಆದರೂ ಸಾಕಷ್ಟು ಜನ ಬಂದಿದ್ದಾರೆ. ಇಷ್ಟೊಂದು ಜನರನ್ನು ನೋಡಿ ನನಗೆ ಮುಜುಗರವಾಯ್ತು ಎಂದಿದ್ದಾರೆ ಭವಾನಿ ರೇವಣ್ಣ.

ಹಿರಿಸಾವೆಯಿಂದಾನೂ ಸಾಕಷ್ಟು ಜನ ನನ್ನ ಜೊತೆಗೆ ಬಂದಿದ್ದಾರೆ. ನಾನೀಗ ರಾಜಕೀಯದ ಬಗ್ಗೆ ಮಾತನಾಡಲ್ಲ. ನಾನು ಜನರಿಂದ ಯಾಕೆ ದೂರ ಉಳಿಯಲಿ..? ಅವರು ನನಗಾಗಿ ಸಾಕಷ್ಡು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೊಟ್ಟಿಗೆ ಇದ್ದು ನಾನು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ. ತುಂಬಾ ಸಂತೋಷವಾಗಿದೆ. ಜನರಿಗೆ ನಾನು ಋಣಿಯಾಗಿರ್ತೇನೆ. ದೇವೇಗೌಡರ ಕಾಲದಿಂದಾನೂ ಜನರು ಸಹಕಾರ ನೀಡಿದ್ದಾರೆ. ಹಾಗಾಗಿ ನನ್ನ ಕೈಲಾದಷ್ಟು ಸಹಾಯವನ್ನು ಅವರಿಗೆ ಮಾಡುತ್ತೇನೆ. ಹಾಸನದಿಂದ ಯಾವುದೇ ಕಾರಣಕ್ಕೂ ದೂರ ಉಳಿಯುವುದಿಲ್ಲ. ನಾನು ಇಲ್ಲಿಗೆ ಬಾರದೆ ಹೋದರು ಜನ ಅಲ್ಲಿಗೆ ಬಂದು ಮಾತನಾಡಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

suddionenews

Recent Posts

ಏಕನಾಥೇಶ್ವರಿ ಸಿಡಿ ಉತ್ಸವಕ್ಕೆ ಮಳೆಯ ಸಿಂಚನ : ಸಾವಿರಾರು ಭಕ್ತರು ಭಾಗಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ. 12…

9 hours ago

ಅಂಬೇಡ್ಕರ್ ರವರ “ಭೀಮ ಹೆಜ್ಜೆ “ಭೀಮ ರಥಯಾತ್ರೆ : ಟಿ ಶರ್ಟ್ ಬಿಡುಗಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏಪ್ರಿಲ್. 12…

9 hours ago

ಕ್ಯಾದಿಗೆರೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಭೂಮಿ ಪೂಜೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಚಿತ್ರದುರ್ಗ ಏ. 12…

10 hours ago

ಫೋನ್ ಪೇ, ಗೂಗಲ್ ಪೇ ವರ್ಕ್ ಆಗದೆ ಜನರ ಪರದಾಟ ; ಏನಾಯ್ತು..?

  ಬೆಂಗಳೂರು; ಕಳೆದ ಕೆಲವು ವರ್ಷಗಳಿಂದಾನೂ ಡಿಜಿಟಲ್ ಪೇಮೆಂಟ್ ಅನ್ನೇ ಜನ ಅನುಸರಿಸುತ್ತಿದ್ದಾರೆ. ಸಣ್ಣಪುಟ್ಟ ವ್ಯವಹಾರಕ್ಕೂ ಜನರ ಬಳಿ ಕ್ಯಾಶ್…

10 hours ago

ಚಿತ್ರದುರ್ಗ : ಏಪ್ರಿಲ್ 15 ರಂದು ಚಿಕ್ಕಪ್ಪನಹಳ್ಳಿ ಕೊಟ್ರಸ್ವಾಮಿ ರಥೋತ್ಸವ

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 : ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಶ್ರೀಗುರು ಕೊಟ್ರ ಸ್ವಾಮಿ ರಥೋತ್ಸವ ಏಪ್ರಿಲ್  15…

11 hours ago

ಚಿತ್ರದುರ್ಗಕ್ಕೆ ಆಗಮಿಸಿದ ಬಿಜೆಪಿಯ ಭೀಮನ ಹೆಜ್ಜೆ ನೂರರ ಸಂಭ್ರಮ ರಥಯಾತ್ರೆ

    ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ.…

11 hours ago