Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾವಿರ ಕನಸು ಕುಡಿತದಿಂದ ನುಚ್ಚುನೂರಾಯ್ತು..ಚಿಕ್ಕವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ಸ್ನೇಹಿತರು..!

Facebook
Twitter
Telegram
WhatsApp

ಬೆಂಗಳೂರು : ನಿಮಗೆಲ್ಲಾ ನೆನಪಿದೆ ನಿನ್ನೆ ಕೋರಮಂಗಲದ ಬಳಿ ನಡೆದ ಕಾರು ಅಪಘಾತ. ಆ ಕಾರು ಅಪಘಾತದಲ್ಲಿ ಡಿಎಂಕೆ ಶಾಸಕನ ಒಬ್ಬನೇ ಒಬ್ಬ ಪುತ್ರ ಕರುಣಾ ಸಾಗರ್ ಮತ್ತು ಆತ ಮದುವೆಯಾಗಬೇಕೆಂದುಕೊಂಡಿದ್ದ ಬಿಂದು, ಮತ್ತವರ ಸ್ನೇಹಿತರು ಸೇರಿ ಕಾರಿನಲ್ಲಿ ಜಾಲಿಯಾಗಿ ಹೊರಟ ಸಮಯ. ಆದ್ರೆ ಯಮಧೂತ ಅದೆಲ್ಲಿದ್ದನೋ ಒಂದೇ ಸಲಕ್ಕೆ ಎಲ್ಲರನ್ನು ಕರೆದುಕೊಂಡು ಹೋಗೇ ಬಿಟ್ಟ. ಇದಕ್ಕೆಲ್ಲಾ ಕಾರಣ ವಿಧಿ ಅಲ್ಲ ಅವರೇ ಮಾಡಿಕೊಂಡ ಸ್ವಯಂಕೃತ ಅಪರಾಧ.

ಯಾಕಂದ್ರೆ ಸಾಕಷ್ಟು ಬಾರಿ ಪೊಲೀಸರು ಕೂಡ ಎಚ್ಚರಿಕೆಯನ್ನ ಕೊಡ್ತಾನೆ ಇರ್ತಾರೆ ಕುಡಿದು ವಾಹನ ಚಲಾಯಿಸಬೇಡಿ ಅಂತ. ಆದ್ರೂ ಅದೇನು ಮೊಂಡು ಧೈರ್ಯವೋ ಏನೋ. ಮತ್ತದೇ ತಪ್ಪುಗಳು. ಇಲ್ಲಿ ಆಗಿದ್ದು ಅದೇ. ಆ ಹುಡುಗಿಯರಿಬ್ಬರ ಕೊನೆ ಕ್ಷಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾತ್ರಿ 8.20 ರ ಸುಮಾರಿಗೆ ಹೊರಟ ಇಷಿತಾ ಹಾಗೂ ಬಿಂದು ಒಂದಷ್ಟು ದೂರ ನಡೆದುಕೊಂಡು ಹೋಗಿರುವುದು ಆ ಬಳಿಕ ವೈನ್ ಶಾಪ್ ಗೆ ಹೋಗಿ ಮದ್ಯ ಖರೀದಿಸಿರುವುದು ಎಲ್ಲವೂ ಸೆರೆಯಾಗಿದೆ. ಸೋನಿ ವರ್ಲ್ಡ್‌ ಮಾರ್ಗದಲ್ಲೂ ಇಬ್ಬರ ದೃಶ್ಯ ಸೆರೆಯಾಗಿದೆ. ಅಲ್ಲಿಂದ ಕರುಣಾ ಸಾಗರ್ ಇವರನ್ನ ಕಾರಿನಲ್ಲಿ ಪಿಕ್ ಮಾಡಿದ್ದಾರೆ.

ಕುಡಿದು ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಕಾರಿನ ವೇಗದಿಂದ ಅಪಘಾತ ಸಂಭವಿಸಿದೆ. ಮುಂಜಾಗ್ರತೆ  ಇಲ್ಲದೆ, ಸಾವಿರ ಕನಸು ಕಂಡಿದ್ದ ಜೀವಗಳು ಅದು ತೀರಾ ಚಿಕ್ಕವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರಲ್ಲಾ ಅನ್ನೋ ಬೇಸರ ಎಲ್ಲರಲ್ಲೂ ಇದೆ. ಹಾಗೇ ಕಣ್ಣ ಮುಂದೆ ಬೆಳೆದ ಮಕ್ಕಳು ಅರ್ಧಕ್ಕೆ ಜೀವನ ಮುಗಿಸಿದರಲ್ಲಾ ಅನ್ನೋ ನೋವು ತಂದೆ ತಾಯಿಯನ್ನ ಬಿಡದೆ ಕಾಡುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16 : ತಾಯಿಯ ಅಂತ್ಯ ಸಂಸ್ಕಾರ ನಡೆಸಿ ಅಂದೇ ಕೆಲಸದಲ್ಲಿ ನಿರತರಾದ ನರೇಂದ್ರಮೋದಿ ಮೂರನೆ ಬಾರಿಗೆ

ಅಭ್ಯರ್ಥಿ ಗೆಲುವಿಗೆ ಶಕ್ತಿ ಕೇಂದ್ರದ ಪ್ರಮುಖರು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿ : ಸಂತೋಷ್‍ ಜಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16  : ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‍ನವರಿಗೆ ಬೇಕಿಲ್ಲ. ಅವರವರ ಕುರ್ಚಿ ಉಳಿಕೊಳ್ಳುವುದೇ

ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನ ಖಾಲಿ ಮಾಡಲು ಹುನ್ನಾರ :  ರೈತ ಮುಖಂಡ  ರಮೇಶ್ ಆರೋಪ

ಸುದ್ದಿಒನ್, ಹಿರಿಯೂರು, ಏಪ್ರಿಲ್. 16 : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ  ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ  ಹಾಗೂ  ಭದ್ರಾ ಮೇಲ್ದಂಡೆ ಅಚುಕಟ್ಟುದಾರ ರೈತಹಿತ ರಕ್ಷಣಾ

error: Content is protected !!