ಬಿಜೆಪಿಯಲ್ಲಿ ಜನರ ಮನವೊಲಿಸಲು ಕುಕ್ಕರ್ ಗಿಫ್ಟ್..!

suddionenews
1 Min Read

ಹಾವೇರಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳು ಜನರ ಸಮಸ್ಯೆ ಕೇಳುವುದಕ್ಕೆ ಹೊರಡುತ್ತಾರೆ. ಮಹಿಳೆಯರಿಗೆ ಏನು ಅಗತ್ಯತೆ ಇರುತ್ತೆ ಅದನ್ನು ನೀಡಿ, ವೋಟ್ ಕೇಳುವುದಕ್ಕೆ ಪ್ರಯತ್ನ ಮಾಡುತ್ತಾರೆ. ಇದೀಗ ಬಿಜೆಪಿ ನಾಯಕರಿಂದ ಮಹಿಳೆಯರಿಗೆ ಗಿಫ್ಟ್ ನೀಡುವ ಕಾರ್ಯಕ್ರಮ ಶುರುವಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಇದೀಗ ಕುಕ್ಕರ್ ಗಿಫ್ಟ್ ನೀಡುವ ಮೂಲಕ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಶುರುವಾಗಿದೆ. ಬಿಜೆಪಿ ಎಂಎಲ್ಸಿ, ಮಾಜಿ ಸಚಿವ ಆರ್ ಶಂಕರ್ ಕುಕ್ಕರ್ ಗಿಫ್ಟ್ ನೀಡುತ್ತಿದ್ದಾರೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಜನತೆಗೆ ಕುಕ್ಕರ್ ಗಿಫ್ಟ್ ನೀಡುವ ಮೂಲಕ ಗಿಫ್ಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ.

ಆರ್ ಶಂಕರ್ ಅವರ ಫೋಟೋ ಇರುವ ಬ್ಯಾನರ್ ಒಂದು ಹರಿದಾಡುತ್ತಿದೆ. ಶಂಕರ್ ಅವರ ಬೆಂಬಲಿಗರು ಮನೆ ಮನೆಗೆ ತೆರಳಿ ಕೂಪನ್‌ ನೀಡುತ್ತಿದ್ದಾರೆ. ಕೂಪನ್ ತೋರಿಸೊದವರಿಗೆ ಗಿಫ್ಟ್ ಕೊಡಲಾಗುತ್ತಿದೆ. ಕುಕ್ಕರ್ ಮೇಲೆ ಸದಾ ನಿಮ್ಮ ಸೇವೆಯಲ್ಲಿ ನಿಮ್ಮ ಮನೆ ಮಗ ಎಂದು ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *