ಕಾಂಗ್ರೆಸ್, ಜೆಡಿಎಸ್ ಅವರದ್ದು ವಿಕೃತ ಮನಸ್ಸು : ಎಂ ಪಿ ರೇಣುಕಾಚಾರ್ಯ ಕಿಡಿ

suddionenews
1 Min Read

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಅವರದ್ದು ವಿಕೃತ ಮನಸ್ಸು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದರು. ಈ ವೇಳೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಎಎಸ್, ಐಪಿಎಸ್ ಅಧಿಕಾರಿಗಳು ಸಂಘ ಪರಿವಾರದವರು ಆಗಿರಬಾರದಾ ?

ಆ ಸ್ಥಾನದಲ್ಲಿ ತಾಲಿಬಾನ್ ಗಳು ಇರಬೇಕಾ ? ಸಂಘ ಪರಿವಾರದವರು ತಾಲಿಬಾನ್ ಗಳು ಅಲ್ಲ. ಇನ್ನೂ ಕಾಂಗ್ರೆಸ್- ಜೆಡಿಎಸ್ ಸಂಸ್ಕೃತಿ ತಾಲಿಬಾನಿಗಳದ್ದು ಎಂದು ಕಿಡಿಕಾರೀದರು.

ಬಿಎಸ್‌ವೈ ಆಪ್ತನ ಮೇಲೆ ಐಟಿ ದಾಳಿ ವಿಚಾರಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ.
ಉಮೇಶ್ ಹೆಸರು ಚನ್ನಾಗಿ ಗೊತ್ತಿದೆ
ಐಟಿ ದಾಳಿ ನಡೆದಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದರು.

ಆರ್‌ಎಸ್‌ಎಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ವಿಚಾರವಾಗಿ ಎಂಪಿ ರೇಣುಕಾಚಾರ್ಯ ಉತ್ತರಿಸಿ,ಕುಮಾರಸ್ವಾಮಿಗೆ ಬುದ್ಧಿಭ್ರಮಣೆಯಾಗಿದೆ.
ದೇಶದ ಸಂಸ್ಕೃತಿ ಉಳಿಸುತ್ತಿರುವುದು ಆರ್‌ಎಸ್‌ಎಸ್, ದೇಶದ ಸಂಕಷ್ಟದಲ್ಲಿ ಗಟ್ಟಿಯಾಗಿ ನಿಲ್ಲುತ್ತಿರುವುದು ಸಂಘ ಪರಿವಾರ.
ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ
ಕಾಂಗ್ರೆಸ್ ಮತ್ತು ಜೆಡಿಎಸ್ ತಾಲಿಬಾನಿಗಳು ಎಂದರು.

Share This Article
Leave a Comment

Leave a Reply

Your email address will not be published. Required fields are marked *