Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಓಲೇಕಾರ್ ಹೊರಿಸಿದ 1500 ಕೋಟಿ ಹಗರಣಕ್ಕೆ ಸಿಎಂ ಫಸ್ಟ್ ರಿಯಾಕ್ಷನ್..!

Facebook
Twitter
Telegram
WhatsApp

 

 

ಬಿಜೆಪಿಯಲ್ಲಿ ಈ ಬಾರಿ ಸಾಕಷ್ಟು ಜನರಿಗೆ ಟಿಕೆಟ್ ಮಿಸ್ ಆಗಿದೆ. ಟಿಕೆಟ್ ಸಿಗದ ಕಾರಣ ಹಲವರು ರಾಜೀನಾಮೆ ಘೋಷಿಸಿದರೆ, ಶಾಸಕ ನೆಹರು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಬೊಮ್ಮಾಯಿ ಕಾರಣ. ಹನಿ ನೀರಾವರಿಗೆ 1500 ಗುಳುಂ ಮಾಡಿದ ಪ್ರಕರಣವನ್ನು ಬಯಲಿಗೆಳೆಯುತ್ತೇನೆ ಎಂದು ಏಕವಚನದಲ್ಲಿಯೇ ದಾಳಿ ನಡೆಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗಳ ದೇವಸ್ಥಾನಗಳಿಗೆ ಭೇಟಿ ನೀಡಿರುವ ಸಿಎಂ ಬೊಮ್ಮಾಯಿ ಅವರು ಈ ಸಂಬಂಧ ಪ್ರತಿಕ್ರಿಯೆ ನೀಡಿ, ದಾಖಲೆ ಇಲ್ಲದೆ ಯಾವುದು ಹಗರಣ ಆಗಲ್ಲ. 1500 ಕೋಟಿ ಅಲ್ಲ ಎಷ್ಟು ಬೇಕಾದರೂ ಮಾಡಲಿ, ದಾಖಲೆ ಸಮೇತ ಮಾಡಲಿ. ನಾನು ಎಲ್ಲರಿಗೂ ಹೇಳಿದ್ದೀನಿ. ಯಾವ ಹಗರಣ ಹೇಳಿಕೆಯಿಂದ ಹಗರಣ ಆಗಲ್ಲ.ದಾಖಲೆ ಸಮೇತ ಆಗಲಿ. ಸತ್ಯಾಸತ್ಯತೆ ಹೊರಗೆ ಬರಲಿ ಎಂದಿದ್ದಾರೆ.

ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿಯೇ ದಾಳಿ ನಡೆಸಿದ್ದರು. ಇಷ್ಟು ದಿನ ಬೊಮ್ಮಾಯಿ ರಾಜಕಾರಣವಿತ್ತು. ನಾಳೆಯಿಂದ ನಮ್ಮ ರಾಜಕಾರಣ ಶುರುವಾಗಲಿದೆ. ಅವನಿಗೆ ಯಾವ ರೀತಿ ಟಕ್ಕರ್ ಕೊಡ್ತೀವಿ ನೋಡ್ತೀರಿ. ಸಿಎಂ ಬೊಮ್ಮಾಯಿಯನ್ನು ಚುನಾವಣೆಯಲ್ಲಿ ಗೆಲ್ಲೋಕೆ ಬಿಡಲ್ಲ. ಅವನ ಧಮ್, ತಾಕತ್ತು ತೋರಿಸಲಿ. ನಮ್ಮ ಜಿಲ್ಲೆಯನ್ನು ಹಾಳು ಮಾಡುವ ದುರುದ್ದೇಶ ಅವನಿಗೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಮೊಟ್ಟೆ ತಿಂದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಮೊಟ್ಟೆ ಸೇವನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ ಎಂದು ಹೇಳುತ್ತಾರೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ12, ವಿಟಮಿನ್ ಡಿ, ಪ್ರೊಟೀನ್, ಕ್ಯಾಲ್ಸಿಯಂ, ಸತು, ಫೋಲೇಟ್ ಮತ್ತು

ಶ್ರೀರಾಮನವಮಿಯಂದು 40 ಲಕ್ಷ ಭಕ್ತರು : ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಯೋಧ್ಯಾ

ಸುದ್ದಿಒನ್ : 500 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ನವಮಿ ಆಚರಣೆ ನಡೆಯುತ್ತಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ಪ್ರಥಮ ಬಾರಿಗೆ ನಡೆಯುತ್ತಿರುವ ಶ್ರೀರಾಮ ಕಲ್ಯಾಣ ಮಹೋತ್ಸವವನ್ನು ಆಯೋಜಿಸಲು

ಈಗ ಈ ರಾಶಿಯವರು ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ

ಈಗ ಈ ರಾಶಿಯವರು ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ, ಈ ರಾಶಿಯವರಿಗೆ ವ್ಯಾಪಾರದಲ್ಲಿ ಆರ್ಥಿಕ ಚೇತರಿಕೆಯಿಂದ ಸಂತಸ, ಮಂಗಳವಾರ ರಾಶಿ ಭವಿಷ್ಯ ಏಪ್ರಿಲ್-16,2024 ಸೂರ್ಯೋದಯ: 06:03, ಸೂರ್ಯಾಸ್ತ : 06:28 ಶಾಲಿವಾಹನ ಶಕೆ1945,

error: Content is protected !!