Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

15 ಸಾವಿರ ಕೋಟಿ ತಂದದ್ದು ಸಾಮರ್ಥ್ಯವೋ ಅಸಾಮರ್ಥ್ಯವೋ : ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ತಿರುಗೇಟು

Facebook
Twitter
Telegram
WhatsApp

ಬೆಂಗಳೂರು: ಸಾಮಾಜಿಕ ನ್ಯಾಯ ಅನ್ನೋದು ಭಾಷಣದ ವಸ್ತುವಾಗಿದೆ. ಏನು ಕೊಟ್ಟಿದ್ದೀರಿ ಇಷ್ಟು ಮಾತನಾಡಿದ್ದೀರಲ್ಲ, ಯಾರಿಗೆ ಕೊಟ್ಟಿದ್ದೀರಿ ಇಷ್ಟು ನ್ಯಾಯವನ್ನು. ಒಂದು ವರ್ಗಕ್ಕಾದರೂ ಕೊಟ್ಟಿದ್ದೀರಿ. ಕೇವಲ ಭಾಷಣದ ಸರಕಾಗಿದೆ. ಅವರ ಮುಇಲಭೂತವಾದದ್ದನ್ನು ಒದಗಿಸಿದರೆ ಅವರ ನ್ಯಾಯವನ್ನು ಅವರೇ ಪಡೆದುಕೊಳ್ಳುತ್ತಾರೆ. ಆ ಶಕ್ತಿಯನ್ನು ತುಂಬ ಬೇಕು ಅಷ್ಟೆ. ಮಠಗಳಿಗೆ ಯಾಕೆ ಸಹಾಯ ಮಾಡಿದ್ದೇನೆ ಎಂದರೆ, ಶಕ್ತಿಯ ಜೊತೆಗೆ, ವಿಧ್ಯೆಯ ಜೊತೆಗೆ ಸಂಸ್ಕಾರ ಬೇಕಾಗಿದೆ. ಹೀಗಾಗಿ ಮಠಗಳ ಮೂಲಕ ಸಂಸ್ಕಾರ ಸಿಗಲಿ ಎಂದು ಈ ಕೆಲಸ ಮಾಡಿದ್ದೇನೆ. ಎಲ್ಲಾ ವರ್ಗದವರಿಗೂ ಸರಿ ಸಮಾನವಾಗಿ ನಿಲ್ಲುತ್ತೇವೆ ಎಂದು ಈ ಸಮಯದಲ್ಲಿ ಹೇಳುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಶಾಲೆಗಳ ಕಟ್ಟಡಕ್ಕೆ ವಿಶೇಷ ಅನುದಾನ ನೀಡಿದ್ದೇನೆ. ಶಿಕ್ಷಣ. ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿ ಕಲ್ಯಾಣ, ಧೀನದಲಿತರಿಗೆ ವಿಶೇಷ ಅನುದಾನ ನೀಡಿದ್ದೇನೆ. ಅವೆಲ್ಲವು ಅನುಷ್ಠಾನವಾಗಲಿದೆ. ಬಜೆಟ್ ಆದ ಮೇಲೆ ನಾನು ಸುಮ್ಮನೆ ಕೂತಿಲ್ಲ. ಇಷ್ಟೆಲ್ಲ ಕಾರ್ಯಕ್ರಮಗಳನ್ನು ನೀಡಿರುವುದು ಎಲ್ಲರು ಸರಿಸಮಾನವಾಗಿ ಬಾಳಬೇಕು ಎಂದು.

ನನ್ನ ಕಲ್ಪನೆಯ ಸರ್ವರಿಗೂ ಸಮಬಾಳು ಎಂಬ ನೀತಿಯಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಬಜೆಟ್ ಕೂಡ ಹಾಗೆ ಇದೆ. ನಾನು ಅಧಿಕಾರಕ್ಕೆ ತೆಗೆದುಕೊಂಡು ಹೋದಾಗ 5 ಸಾವಿರ ಕೋಟಿ ರೂಪಾಯಿ ಬರಲು ಕಷ್ಟವಾಗಿತ್ತು. ಆದರೆ ಅದು ಬರಲೇಬೇಕೆಂದು ಆರು ತಿಂಗಳು ಮಾಡಿದ ಪ್ರಯತ್ನದಿಂದ 15 ಸಾವಿರ ಕೋಟಿ ಹಣ ಬಂದಿದೆ. ಇದು ಅಸಮರ್ಥತೆಯಿಂದ ಬರುತ್ತೋ ಅಸಾಮರ್ಥ್ಯದಿಂದ ಬರುತ್ತದೋ ಎಂದು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

ಚಿತ್ರದುರ್ಗ ನಗರಸಭೆಯ ಆಸ್ತಿ ಸೇರಿದಂತೆ ಇನ್ನಿತರೆ ತೆರಿಗೆಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಗೆ ಅವಕಾಶ : ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ. ಏ.19:  ಚಿತ್ರದುರ್ಗ ನಗರಸಭೆಯ ಆಸ್ತಿ ತೆರಿಗೆ, ನೀರಿನ ಕರ ಹಾಗೂ ಇತರೆ ಶುಲ್ಕಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಅಪ್ಲಿಕೇಷನ್‍ಗಳಾದ ಭೀಮ್, ಭಾರತ್ ಬಿಲ್ ಪೇ, ಫೋನ್

ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತು ಕಾಂಗ್ರೆಸ್ ನೇತ್ರತ್ವದ ಇಂಡಿಯಾವನ್ನು ನಾವು ಸಮಾನವಾಗಿ ವಿರೋಧಿಸುತ್ತೇವೆ : ಸಂವಾದ ಕಾರ್ಯಕ್ರಮದಲ್ಲಿ ಕಾಮ್ರೇಡ್ ಕೆ.ರಾಧಾಕೃಷ್ಣ ಹೇಳಿಕೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : “ದೇಶದಾದ್ಯಂತ ಇಂದು ಎರಡು ಒಕ್ಕೂಟಗಳು ಜನರ ಮುಂದಿವೆ. ಒಂದು ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತು ಇನ್ನೊಂದು ಕಾಂಗ್ರೆಸ್ ನೇತ್ರತ್ವ ಇಂಡಿಯಾ. ಇವೆರಡನ್ನು ನಾವು ಸಮಾನವಾಗಿ ವಿರೋಧಿಸುತ್ತೇವೆ ಎಂದು

error: Content is protected !!