Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಮಳೆ ವರದಿ : ಜಿಲ್ಲೆಯಾದ್ಯಂತ 50 ಮನೆಗಳು ಭಾಗಶಃ ಹಾನಿ : ಬಬ್ಬೂರಿನಲ್ಲಿ ಹೆಚ್ಚು ಮಳೆ

Facebook
Twitter
Telegram
WhatsApp

 

ಚಿತ್ರದುರ್ಗ,(ನವೆಂಬರ್03) : ಜಿಲ್ಲೆಯಲ್ಲಿ ನವೆಂಬರ್ 02ರಂದು ಸುರಿದ ಮಳೆ ವಿವರದನ್ವಯ ಹಿರಿಯೂರು ತಾಲ್ಲೂಕಿನ  ಬಬ್ಬೂರಿನಲ್ಲಿ 35.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಉಳಿದಂತೆ ಹಿರಿಯೂರಿನಲ್ಲಿ 24 ಮಿ.ಮೀ, ಈಶ್ವರಗೆರೆ 16.4 ಮಿ.ಮೀ, ಇಕ್ಕನೂರಿನಲ್ಲಿ 2.4 ಮಿ,ಮೀ, ಸುಗೂರಿನಲ್ಲಿ 4.2 ಮಿ.ಮೀ. ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 20 ಮಿ.ಮೀ, ಪರಶುರಾಂಪುರ 8.2 ಮಿ.ಮೀ, ನಾಯಕನಹಟ್ಟಿ 17.8 ಮಿ.ಮೀ,  ಡಿ.ಮರಿಕುಂಟೆ 16.4 ಮಿ.ಮೀ, ತಳುಕು 13.4 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 17.2 ಮಿ.ಮೀ, ರಾಮಗಿರಿ 16.4 ಮಿ.ಮೀ, ಹೆಚ್.ಡಿ.ಪುರ 7.4ಮಿ.ಮೀ, ತಾಳ್ಯ 3.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 8.2 ಮಿ.ಮೀ, ಚಿತ್ರದುರ್ಗ -2ರಲ್ಲಿ 9 ಮಿ.ಮೀ, ಹಿರೇಗುಂಟನೂರು 1 ಮಿ.ಮೀ, ಐನಹಳ್ಳಿ 8.2 ಮಿ.ಮೀ, ಭರಮಸಾಗರ 3 ಮಿ.ಮೀ, ಸಿರಿಗೆರೆ 5.2 ಮಿ.ಮೀ, ತುರುವನೂರು 13.6 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರಿನ ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 31.6 ಮಿ.ಮೀ ರಾಯಾಪುರ 30.8 ಮಿ.ಮೀ, ಬಿ.ಜಿ.ಕೆರೆ 24.2 ಮಿ.ಮೀ, ರಾಂಪುರ 20.1 ಮಿ.ಮೀ, ದೇವಸಮುದ್ರ 23.2 ಮಿ.ಮೀ ಮಳೆಯಾಗಿದೆ.

50 ಮನೆಗಳು ಭಾಗಶಃ ಹಾನಿ: ಬುಧವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 50 ಮನೆಗಳು ಭಾಗಶಃ ಹಾನಿಯಾಗಿದ್ದು, 20 ಮನೆಗಳಿಗೆ ಮಳೆ ನೀರು ನುಗ್ಗಿವೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 8 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 8 ಮನೆಗಳು ಭಾಗಶಃ ಹಾನಿಯಾಗಿವೆ.

ಹಿರಿಯೂರು ತಾಲ್ಲೂಕಿನಲ್ಲಿ 20 ಮನೆಗಳು ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ.

ಹೊಳಲ್ಕೆರೆ ತಾಲ್ಲೂಕಿನಲ್ಲಿ 6 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಇಂದು ಅಥವಾ ನಾಳೆ ಮದುವೆ ಚರ್ಚೆ ಸಂಭವ

ಈ ರಾಶಿಯವರಿಗೆ ಇಂದು ಧನ ಇದೆ, ಈ ರಾಶಿಯವರಿಗೆ ಇಂದು ಅಥವಾ ನಾಳೆ ಮದುವೆ ಚರ್ಚೆ ಸಂಭವ, ಶನಿವಾರ ರಾಶಿ ಭವಿಷ್ಯ -ಮಾರ್ಚ್-30,2024 ಸೂರ್ಯೋದಯ: 06:15, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944, ಶುಭಕೃತ

ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಭೇಟಿ | ಬಿ. ಫಾರಂಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭ

ಸುದ್ದಿಒನ್, ಚಿತ್ರದುರ್ಗ, ಮಾ.29: ದೇವರು ಮತ್ತು ಜನರ ಮೇಲೆ ನಂಬಿಕೆ ಹೊಂದಿದ ವ್ಯಕ್ತಿ ಎಂದೂ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

ಗೋ ಬ್ಯಾಕ್ ಗೋವಿಂದ ಕಾರಜೋಳ | ಬಿಜೆಪಿ ಅಭ್ಯರ್ಥಿಗೆ ಚಿತ್ರದುರ್ಗದಲ್ಲಿ ತಟ್ಟಿದ ಬಂಡಾಯದ ಬಿಸಿ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29  : ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಬಂಡಾಯದ ಬಿಸಿ ತಟ್ಟಿದೆ. ಟಿಜೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಆದರೆ ಇದೆ ವೇಳೆ ಟಿಕೆಟ್

error: Content is protected !!