ಚಿತ್ರದುರ್ಗ : ಕೋಟೆಯಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಲ್ಲಿ ಆತಂಕ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 : ಇತ್ತೀಚಿನ ದಿನಗಳಲ್ಲಿ ಚಿರತೆಗಳು ಸೇರಿದಂತೆ ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಕೆಲವೊಂದು ಕಡೆ ದಾಳಿಗಳನ್ನು ನಡೆಸಿವೆ. ಚಿರತೆ ಕಂಡರೆ ಜನ ಭಯಭೀತಿಗೊಳ್ಳುತ್ತಾರೆ. ಈಗ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ. ಇಂದು ಸಂಜೆ ವೇಳೆಗೆ ಚಿರತೆಯ ಹೆಜ್ಜೆ ಗುರುತನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಸಂಜೆ 5.45 ರ ಸುಮಾರಿಗೆ ಕೋಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ಪ್ರವಾಸಿಗರಿಗೆ ಕೋಟೆನಾಡಿನ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದಾಗ ಚಿರತೆ ಪ್ರತ್ಯಕ್ಷವಾಗಿದೆ. ಕೋಟೆ ಮಾರ್ಗದರ್ಶಿ ಮೊಹಿದ್ದೀನ್ ಖಾನ್ ಬಸವರಾಜ್, ಪರಶುರಾಮ್ ಮತ್ತು ಪ್ರವಾಸಿಗರ ಕಣ್ಣಿಗೆ ಚಿರತೆ ಕಾಣಿಸಿಕೊಂಡಿದೆ. 5.50 ಕ್ಕೆ ಗಂಗಾವತಿಯ ಪ್ರವಾಸಿಗರು ಕೋಟೆ ನೋಡಲು ಬಂದಿದ್ದರು. ಸುಮಾರು 50 ಜನರ ತಂಡ ಬಂದಿತ್ತು. ಅವರೆಲ್ಲರು ಟಿಕೆಟ್ ಪಡೆದು ಕೋಟೆ ನೋಡಲು ಮೇಲೆ ಹತ್ತುತ್ತಿದ್ದರು. ಆಗ ಕೋಟೆಯ 6ನೇ ಸುತ್ತಿನ ಬಾಗಿಲ ಬಳಿ ಈ ಚಿರತೆ ಕಾಣಿಸಿಕೊಂಡಿದೆ. ಅದು ಯಾರ ಭಯವೂ ಇಲ್ಲದೆ, ಹೊಸದಾಗಿ ನಿರ್ಮಾಣವಾಗಿರುವ ಟಾಯ್ಲೆಟ್ ಮೇಲಿನ ಹೆಬ್ಬoಡೆ ಮೇಲೆ ಕೂತಿತ್ತು. ಅಷ್ಟೇ ಅಲ್ಲ ಕೋಟೆ ನೋಡಲು ಬಂದಿದ್ದ ಜನರನ್ನೇ ದಿಟ್ಟಿಸಿ ನೋಡುತ್ತಿತ್ತು. ಅದನ್ನು ಕಂಡ ಪ್ರವಾಸಿಗರು ಗಾಬರಿಯಾಗಿದ್ದಾರೆ. ಬಳಿಕ ಕೋಟೆ ಮೇಲಿಂದ ಓಡಿ ಬಂದ ಜನ ಉಳಿದವರಿಗೂ ಚಿರತೆಯನ್ನು ತೋರಿಸಿದರು. ಜನರನ್ನು ಕಂಡರು ಹೆದರದ ಚಿರತೆ ಸುಮಾರು 1/2 ಘಂಟೆಗಳ ಕಾಲ ಅಲ್ಲೇಯೇ ಕೂತಿತ್ತು. ಬಳಿಕ ಆ ಸ್ಥಳದಿಂದ ಓಡಿ ಹೋಯ್ತು ಎಂದು ಹಿರಿಯ ಪ್ರವಾಸಿ ಮಾರ್ಗದರ್ಶಿ ಬಿ. ಮೊಹಿದ್ದೀನ್ ಖಾನ್ ತಿಳಿಸಿದ್ದಾರೆ.

suddionenews

Recent Posts

ಇಂದು ದ್ವಿತೀಯ ಪಿಯುಸಿ ಫಲಿತಾಂಶ ; ಎಷ್ಟು ಗಂಟೆಗೆ ಸಿಗಲಿದೆ ರಿಸಲ್ಟ್..?

ಬೆಂಗಳೂರು; ಪರೀಕ್ಷೆ ಬರೆದು ಫಲಿತಂಶಕ್ಕಾಗಿ ಕಾಯುತ್ತಿರುವ ದ್ವಿತೀಯ ಪಿಯುಸಿ ಮಕ್ಕಳಿಗೆ ಇಂದು ಢವಢವ ಶುರುವಾಗಿದೆ. ಎಷ್ಟೇ ಚೆನ್ನಾಗಿ ಬರೆದಿದ್ದರು, ನಿರೀಕ್ಷೆ…

1 hour ago

ದಿನಕ್ಕೆ ಎಷ್ಟು ಬಾರಿ ಅನ್ನ ತಿನ್ನಬೇಕು? ಹೆಚ್ಚಾಗಿ ತಿನ್ನುವುದು ಒಳ್ಳೆಯದೇ?

ಸುದ್ದಿಒನ್ : ಸಾಂಪ್ರದಾಯಿಕವಾಗಿ, ಅನ್ನ ನಮ್ಮ ಪ್ರಧಾನ ಆಹಾರ. ಬಹುತೇಕ ಎಲ್ಲಾ ಊಟಗಳಲ್ಲಿ ಅನ್ನವು ಪ್ರಧಾನ ಆಹಾರವಾಗಿದೆ. ದಿನಕ್ಕೆ ಒಂದಕ್ಕಿಂತ…

2 hours ago

ಈ ರಾಶಿಯವರಿಗೆ ವ್ಯಾಪಾರ ವಹಿವಾಟಗಳಲ್ಲಿ ನಷ್ಟವಾಗಲು ಏನು ಕಾರಣ ಇರಬಹುದು?

ಈ ರಾಶಿಯವರಿಗೆ ವ್ಯಾಪಾರ ವಹಿವಾಟಗಳಲ್ಲಿ ನಷ್ಟವಾಗಲು ಏನು ಕಾರಣ ಇರಬಹುದು? ಲಾಭ ಗಳಿಸಲು ಏನು ಮಾಡಬೇಕು. ಮಂಗಳವಾರದ ರಾಶಿ ಭವಿಷ್ಯ…

5 hours ago

ಕೋರ್ಟ್ ನಿರ್ಬಂಧ ಸಡಿಲಿಕೆ ; ಊರಿಗೆ ಬಂದ ಭವಾನಿ ರೇವಣ್ಣರಿಗೆ ಹೂವಿನ ಸ್ವಾಗತ.. ನನಗೆ ಮುಜುಗರವಾಗುತ್ತೆ ಅಂದಿದ್ಯಾಕೆ ದೊಡ್ಡಗೌಡ್ರ ಸೊಸೆ..?

ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…

14 hours ago

ರಾಜ್ಯದ ಮುಂದಿನ ಸಿಎಂ ಬಗ್ಗೆ ಕೋಡಿಶ್ರೀ ಭವಿಷ್ಯ ; ಏನಂದ್ರು ಸ್ವಾಮೀಜಿ..?

ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…

15 hours ago

ಹಿರಿಯೂರು : ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್ ವ್ಯತ್ಯಯ

ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…

15 hours ago