ಚಿತ್ರದುರ್ಗ, (ಆ. 30) : ನಗರದ ಶ್ರೀ ಕಬೀರಾನಂದ ಸ್ವಾಮಿ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕಭೀರಾನಂದ ಸಂಸ್ಕೃತಿ ಪಾಠಶಾಲೆಯವತಿಯಿಂದ ವಿಶ್ವ ಸಂಸ್ಕೃತ ದಿನೋತ್ಸವದ ಅಂಗವಾಗಿ ನಗರದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರಾವಣ ಮಾಸದ ಹುಣ್ಣಿಮೆಯಂದು ನಾಡಿನೆಲ್ಲಡೆ ವಿಶ್ವ ಸಂಸ್ಕೃತ ದಿನೋತ್ಸವವನ್ನು ಆಚರಣೆ ಮಾಡಲಾಗುತ್ತದೆ, ಸಂಸ್ಕೃತ ನಮ್ಮ ಪುರಾತನವಾದ ಭಾಷೆಯಾಗಿದೆ. ಇದರ ಬಳಕೆ ಇತ್ತಿಚೀನ ದಿನಮಾನದಲ್ಲಿ ಕಡಿಮೆಯಾಗುತ್ತಿದೆ ಇದನ್ನು ಎಲ್ಲರು ಸಹಾ ಕಲಿಯಬೇಕಿದೆ.
ಇದನ್ನು ಕಲಿಯುವುದರಿಂದ ನಮ್ಮ ಇತಿಹಾಸವನ್ನು ತಿಳಿದಂತೆ ಆಗುತ್ತದೆ.
ನಗರದ ಕರುವಿನಕಟ್ಟೆ ಬಳಿಯಲ್ಲಿನ ಕಭೀರಾನಂದ ಸಂಸ್ಕೃತಿ ಪಾಠ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಜಾಥಾದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸಂಸ್ಕøತವನ್ನು ಕಲಿಯಿರಿ ಸೇರಿದಂತೆ ಇತರೆ ಭೀತ್ತಿ ಪತ್ರಗಳನ್ನು ಹಿಡಿದು ಜಾಥಾದಲ್ಲಿ ಭಾಗವಹಿಸಿದ್ದರು.
ಜಾಥಾ ನಗರದ ಕಬೀರಾನಂದಾಶ್ರಮದ ಬಳಿಯಿಂದ ಪ್ರಾರಂಭವಾಗಿ ಫಿಲ್ಟರ್ ಹೌಸ್, ಏಕಣಾಥೇಶ್ವತಿ ಪಾದಗುಡಿ, ಉಚ್ಚಂಗಿ ಯಲ್ಲಮ್ಮ ದೇವಾಲಯ ದೊಡ್ಡಪೇಟೆ, ರಂಗಯ್ಯನ ಬಾಗಿಲು ಉಜ್ಜನಿ ಮಠ, ಕರುವಿನ ಕಟ್ಟೆ ವೃತ್ತವನ್ನು ಹಾದು ಮರಳಿ ಕಬೀರಾನಂದಾಶ್ರಮವನ್ನು ಸೇರಿದೆ.
ಈ ಕಾರ್ಯಕ್ರಮದಲ್ಲಿ ಸಂಸ್ಕೃತ ಶಾಲೆಯ ಮಖ್ಯೋಪಾಧ್ಯಾಯರಾದ ಗಣಪತಿ ಶಾಸ್ತ್ರಿ, ಸಹ ಶಿಕ್ಷಕರಾದ ಪಿ.ಕೆ.ಸುಮನ, ಆರ್.ಹೇಮಾವತಿ, ಸುಬ್ರಾರಾಯ್ ಭಟ್, ಮಂಜುನಾಥ್ ಸೇರಿದಣಂತೆ ಇತರರು ಭಾಗವಹಿಸಿದ್ದರು.
ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…
ಬೆಂಗಳೂರು; ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ದೊಡ್ಡ ಕನಸಿರುತ್ತದೆ. ಪೋಷಕರ ಆಸೆಯಂತೆ ಮಕ್ಕಳು ನಡೆದುಕೊಳ್ಳುವುದು ಸಾಮಾನ್ಯ. ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…