ಚಿತ್ರದುರ್ಗ | ಭೀಮಸಮುದ್ರ ಗ್ರಾ.ಪಂ.ಉಪಾಧ್ಯಕ್ಷ ಅವಿಶ್ವಾಸ ಮಂಡನೆ ವಿಫಲ : ಉಮೇಶ್ ಮುಂದುವರಿಕೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : ತಾಲೂಕಿನ ಭೀಮಸಮುದ್ರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ರದ್ದುಗೊಂಡಿದೆ.

 

ಫೆಬ್ರವರಿ 05 ರಂದು ಒಟ್ಟು 20 ಸದಸ್ಯರ ಪೈಕಿ 14 ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ, ಉಪ ವಿಭಾಗಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು. ಅವಿಶ್ವಾಸ ನಿರ್ಣಯ ಮಂಡಿಸಲು ಇಂದು (ಮಾರ್ಚ್.03, ಸೋಮವಾರ) 12 ಗಂಟೆಗೆ ಸಮಯ ನಿಗದಿಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ಸಭೆ ಕರೆದಿದ್ದರು. ಕೇವಲ ಒಬ್ಬರನ್ನು ಹೊರತುಪಡಿಸಿ ಎಲ್ಲ ಸದಸ್ಯರು ಗೈರು ಹಾಜರಾದ ಕಾರಣ ಅವಿಶ್ವಾಸ ಸೂಚನೆ ಸಭೆ ಕರೆಯಲು ನೀಡಿದ್ದ ಅರ್ಜಿ ರದ್ದುಗೊಳಿಸಲಾಗಿದೆ. ಅಧ್ಯಕ್ಷರಾಗಿ ಪಾಲಾಕ್ಷಮ್ಮ ಮತ್ತು ಉಪಾಧ್ಯಕ್ಷರಾಗಿ ಉಮೇಶ್ ಮುಂದುವರೆದರು. ಅವಿಶ್ವಾಸ ಸೂಚನೆ ಸಭೆ ರದ್ದಾದ ಹಿನ್ನಲೆಯಲ್ಲಿ ಉಪಾಧ್ಯಕ್ಷರಿಗೆ ಗ್ರಾಮದ ಮುಖಂಡರು ಹೂವಿನ ಹಾರ ಹಾಕಿಕೊಂಡು ಸಂತಸ ಹಂಚಿಕೊಂಡರು.

suddionenews

Recent Posts

ಬಿರು ಬೇಸಿಗೆಗೆ ಈ ಹಣ್ಣುಗಳನ್ನು ತಪ್ಪದೆ‌ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ

ಹೊರಗೆ ಹೋದರೆ ತಣ್ಣನೆಯ ಗಾಳಿ ಎಲ್ಲಾದರೂ ಬೀಸುತ್ತಾ, ನೆರಳು ಸಿಗುತಚತಾ, ಎಷ್ಟೊತ್ತಿಗೆ ಮನೆ ಸೇರ್ತೀವಿ ಎಂಬ ಚಿಂತೆ ಶುರುವಾಗುತ್ತದೆ. ಅದಕ್ಕೆ…

2 hours ago

ಈ ರಾಶಿಯವರ ವ್ಯಾಪಾರ ಡಬಲ ಲಾಭ

ಈ ರಾಶಿಯವರ ವ್ಯಾಪಾರ ಡಬಲ ಲಾಭ, ಈ ರಾಶಿಯವರ ವ್ಯಾಪಾರದಲ್ಲಿ ಬರೀ ನಷ್ಟ, ಶುಕ್ರವಾರದ ರಾಶಿ ಭವಿಷ್ಯ 21 ಮಾರ್ಚ್…

3 hours ago

IPL 2025; RCB ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

  ಮಾರ್ಚ್ 22ರಿಂದ 18ನೇ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ. ಈ 17 ಆವೃತ್ತಿಗಳಲ್ಲೂ ಒಂದೇ ಒಂದು ಮ್ಯಾಚ್ ಅನ್ನು ಆರ್ಸಿಬಿ…

11 hours ago

ಚಿತ್ರದುರ್ಗ ಜಿಲ್ಲೆಯಾದ್ಯಂತ ಕ್ಲಬ್‌ಗಳ ಮೇಲೆ ದಾಳಿ : ನಗದು ವಶ, ಹಲವರ ಬಂಧನ

  ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 20 : ಜಿಲ್ಲೆಯಾದ್ಯಂತ ಇಸ್ಪೀಟು ಜೂಜು ಅಡ್ಡೆಗಳ ಮೇಲೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು…

11 hours ago

ಪರಿಣಾಮ ಬೋಧನೆಗೆ ರಂಗಭೂಮಿ ಉತ್ತಮ ಮಾರ್ಗದರ್ಶನ : ಕೆ.ಎಂ.ವೀರೇಶ್

  ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 20 : ಪ್ರಶಿಕ್ಷಣಾರ್ಥಿಗಳು ಪಠ್ಯ ಬೋಧನೆಯಲ್ಲಿ ರಂಗಭೂಮಿಯ ಕೌಶಲಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು. ಪರಿಣಾಮ ಬೋಧನೆಗೆ…

13 hours ago

ಕಾಟಲಿಂಗೇಶ್ವರಸ್ವಾಮಿ ಹಾಗೂ ಕದುರೆ ನರಸಿಂಹಸ್ವಾಮಿಯ ದೊಡ್ಡ ದೇವರ ಜಾತ್ರೆಗೆ ಚಾಲನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 20…

14 hours ago