ಚಿತ್ರದುರ್ಗ : ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರ ನೇಮಕ

suddionenews
1 Min Read

ಚಿತ್ರದುರ್ಗ, (ಜ.23) : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರನ್ನು ಪರಿಷತ್ತಿನ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಅವರು ನೇಮಕ ಮಾಡಿದ್ದಾರೆ.

ತಾಲ್ಲೂಕುವಾರು ನೇಮಕವಾದವರ ವಿವರ ಈ ಕೆಳಗಿನಂತಿದೆ.

ಹೊಳಲ್ಕೆರೆ – ಎನ್. ಶಿವಮೂರ್ತಿ
ಚಳ್ಳಕೆರೆ – ಜಿ.ಟಿ.ವೀರಭದ್ರಸ್ವಾಮಿ
ಚಿತ್ರದುರ್ಗ – ರಾಮಲಿಂಗಶೆಟ್ಟಿ
ಹೊಸದುರ್ಗ – ಬಿ.ಪಿ.ಓಂಕಾರಪ್ಪ
ಮೊಳಕಾಲ್ಮೂರು – ಜಿಂಕಾ ಶ್ರೀನಿವಾಸ್
ಹಿರಿಯೂರು – ಡಾ. ಎ.ಎಂ.ನಾಗೇಶ್

ಜಿಲ್ಲಾ ಕಸಾಪ ಪದಾಧಿಕಾರಿಗಳು : ಜಿಲ್ಲಾ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಕೆ.ಎಂ. ಶಿವಸ್ವಾಮಿ,
ಗೌರವ ಕಾರ್ಯದರ್ಶಿಗಳಾಗಿ ಬಿ.ವಿ.ನಾಥ್ ಹಾಗೂ ಕೆ.ಪಿ.ಎಂ. ಗಣೇಶಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ವಿ.ಧನಂಜಯ, ಖಜಾಂಚಿಯಾಗಿ ಸಿ.ಲೋಕೇಶ್ ರವರಿಗೆ ಜವಾಬ್ದಾರಿ ನೀಡಲಾಗಿದೆ.

ಮಹಿಳಾ ಪ್ರತಿನಿಧಿಗಳಾಗಿ ಚಂದ್ರಿಕಾ ಮತ್ತು ಆರ್. ರೀನಾ ವೀರಭದ್ರಪ್ಪ ರವರನ್ನು ನೇಮಕ ಮಾಡಲಾಗಿದೆ. ನಾ. ಕೆಂಚವೀರಪ್ಪ, ಸಿ.ರಂಗನಾಯಕ, ಟಿ.ತಿಪ್ಪೇಸ್ವಾಮಿಯವರನ್ನು ಪ್ರತಿನಿಧಿಗಳನ್ನಾಗಿ ನೇಮಿಸಲಾಗಿದೆ. ಸಂಘ ಸಂಸ್ಥೆಗಳ ವತಿಯಿಂದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ರವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಾರ್ತಾಧಿಕಾರಿಯಾದ ಬಿ.ಧನಂಜಯರವರು ಜಿಲ್ಲಾ ಸಮಿತಿಯ ಖಾಯಂ ಪ್ರತಿನಿಧಿಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *