ರೈತರೊಂದಿಗೆ ಒಂದು ದಿನಕ್ಕೆ ವರ್ಷದ ಸಂಭ್ರಮ : ಸಚಿವ ಬಿ ಸಿ ಪಾಟೀಲ್ ಗೆ ಹರುಷ

suddionenews
1 Min Read

ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮಹತ್ವಾಕಾಂಕ್ಷೆಯ ರೈತರೊಂದಿಗೊಂದು ದಿನ ಕಾರ್ಯಕ್ರಮಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಇದೇ ಖುಷಿಯಲ್ಲಿ ಸಚಿವ ಬಿ ಸಿ ಪಾಟೀಲ್ ತಮ್ಮ ಹುಟ್ಟುಹಬ್ಬವನ್ನ ರೈತರೊಂದಿಗೆ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕಳೆದ ಬಾರಿಯೂ ಅವರ ಹುಟ್ಟುಹಬ್ಬವನ್ನ ರೈತರೊಟ್ಟಿಗೇನೆ ಆಚರಿಸಿದ್ದರು. ಅಂದ್ಹಾಗೆ ನ.14 ಬಿ ಸಿಪಾಟೀಲರ ಜನ್ಮದಿನ.

ರೈತರಿಗೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಆತ್ಮಹತ್ಯೆ ತಡೆಗಟ್ಟಿ ಕೋಲಾರ ಮಾದರಿಯ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ರೈತರಲ್ಲಿ ಈ ಕುರಿತು ಜಾಗೃತಿ ಹೆಚ್ಚಿಸಲು ಆರಂಭವಾಗಿದ್ದೇ “ರೈತರೊಂದಿಗೊಂದು ದಿನ”. ಕಳೆದ ನ.14 ರಂದು ಆರಂಭವಾದ ಈ ದಿನ ಈಗ ಒಂದು ವರ್ಷ ಪೂರೈಸುತ್ತಿದ್ದು, ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಮೆಚ್ಚಿ ಕೃಷಿ ಇಲಾಖೆಗೆ ಸ್ವಯಂಪ್ರೇರಿತರಾಗಿ ರಾಯಭಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಈ ಬಾರಿಯ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ ಕೃಷಿ ಸಚಿವರೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ.

ರೈತರೊಂದಿಗೊಂದು ದಿನ ಈಗಾಗಲೇ 10 ಜಿಲ್ಲೆಗಳಲ್ಲಿ ನಡೆದಿದ್ದು, ಹಾವೇರಿ 11 ನೇ ಜಿಲ್ಲೆಯಾಗಿದೆ. ಬಿ.ಸಿ.ಪಾಟೀಲರು ಕೋವಿಡ್ ನಿರ್ಬಂಧದಲ್ಲಿಯೂ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಂಕಷ್ಟವನ್ನು ಅರಿಯುವ ಪ್ರಯತ್ನ ಮಾಡಿದ್ದರು. ಇದೆಲ್ಲದರಿಂದ ರೂಪತಳೆದಿದ್ದೇ “ರೈತರೊಂದಿಗೊಂದು ದಿನ”. ಕೃಷಿ ಸಚಿವರು ಹಾಗೂ ಕೃಷಿ ಅಧಿಕಾರಿಗಳು ರೈತರ ಬಳಿಯೇ ತೆರಳಿ ಅವರ ಸಂಕಷ್ಟವನ್ನು ಅರಿತು ಸಾಧ್ಯವಾದಲ್ಲಿ ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಬಾರಿಯ ರೈತರೊಂದಿಗೊಂದು ದಿನ ಕೃಷಿ ಸಚಿವರ ಮತಕ್ಷೇತ್ರ ಹಿರೇಕೆರೂರಿನಲ್ಲಿ ಆಯೋಜನೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *