ಭಾರತ – ಪಾಕಿಸ್ತಾನ ನಡುವಿನ ಟಿ20 ಪಂದ್ಯ ರದ್ದಿಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಒತ್ತಾಯ..!

suddionenews
1 Min Read

ಭಾರತ – ಪಾಕಿಸ್ತಾನ ನಡುವಿನ ಟಿ20 ಪಂದ್ಯ ರದ್ದಿಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಒತ್ತಾಯ..!

ಸುದ್ದಿಒನ್, ಚಿತ್ರದುರ್ಗ, (ಅ.20): ಕಾಶ್ಮೀರದಲ್ಲಿ ಭಾರತೀಯ ಮೂಲನಿವಾಸಿಗಳ ಮೇಲೆ ಹಲ್ಲೆ- ಕೊಲೆ ನಡೆದಿದೆ. ಇತ್ತ ಭಾರತ – ಪಾಕಿಸ್ತಾನ ಪಂದ್ಯ ನಡೆಸಲು ಆಯೋಜಕರು ತಯಾರಿ ನಡೆಸುತ್ತಿದ್ದಾರೆ.ಇದಕ್ಕೆ ಶಾಸಕ ತಿಪ್ಪಾರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಬೆಳಿಗ್ಗೆ ಮಾತನಾಡಿ, ಭಾರತ-ಪಾಕಿಸ್ತಾನ ನಡುವಿನ ಟಿ20 ಪಂದ್ಯ ರದ್ದಿಗೆ ಚಿತ್ರದುರ್ಗ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಒತ್ತಾಯಿಸಿದ್ದು, ನಿರಪರಾಧಿಗಳು ಮೂಲ ಭಾರತೀಯರ ಹತ್ಯೆ ನಡೆಯುತ್ತಿದೆ. ಭಾರತದ ಕ್ರಿಕೆಟ್ ಮಂಡಳಿ ಕ್ರೀಡೆ ಆಯೋಜಿಸಬಾರದು.

ಈ ಬಗ್ಗೆ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಪಂದ್ಯ ರದ್ದುಮಾಡಿ ಭಾರತ ಪ್ರತಿಭಟನೆ ದಾಖಲಿಸಬೇಕು. ಪಾಕಿಸ್ತಾನದ ಈ ಧೋರಣೆಯನ್ನು ಖಂಡಿಸಬೇಕಿದೆ. ಕಾಶ್ಮೀರಿ ಪಂಡಿತರು ಹಾಗೂ ಕೂಲಿ ಮಾಡಲು ಹೋದವರು ಹತ್ಯೆಯಾಗಿದ್ದಾರೆ. ಯಾವುದೇ ಕಾರಣಕ್ಕೂ ಪಾಕಿಸ್ತಾನ ಜೊತೆ ಪಂದ್ಯ ಬೇಡ. ಪ್ರಪಂಚದಲ್ಲಿ ಭಾರತವನ್ನು ಯಾವುದೇ ಭಾವನೆಯಿಂದ ನೋಡಿದ್ರೂ ಪರವಾಗಿಲ್ಲ. ನನ್ನದೊಂದು ಸಲಹೆ ಪಾಕಿಸ್ತಾನ ಜೊತೆ ಮ್ಯಾಚ್ ಬೇಡ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *