ಆರ್‌ಎಸ್‌ಎಸ್ ಸಂಸ್ಥಾಪನಾ ದಿನಕ್ಕೆ ಬಿಎಸ್‌ವೈ ಶುಭಾಶಯ

suddionenews
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಸ್ವಯಂಸೇವಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ರಾಷ್ಟ್ರನಿಷ್ಠೆ, ದೇಶ ಸೇವೆಯ ಪರಮ ಧ್ಯೇಯದೊಂದಿಗೆ ಸಮಾಜದ ವಿವಿಧ ಸ್ತರಗಳಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಪೂರಕವಾಗಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಸಂಘದ ಎಲ್ಲಾ ಸ್ವಯಂಸೇವಕರಿಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕ ಡಾ.ಮೋಹನ್ ಭಾಗವತ್ ಇಂದು ಬೆಳಿಗ್ಗೆ 7:30ಕ್ಕೆ ಭಾಷಣ ಮಾಡಿದರು. ಸರ್ಕಾರಿ ನಿವಾಸ ಕಾವೇರಿಯಲ್ಲಿ ವರ್ಚುವಲ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಭಾಗವತ್ ನೀಡಿದ ಸಂದೇಶವನ್ನು ಬಿಎಸ್​ವೈ ವೀಕ್ಷಿಸಿದರು.

ನಾಡಿನ ಎಲ್ಲರಿಗೂ ವಿಜಯದಶಮಿ ಹಬ್ಬದ ಹೃದಯಪೂರ್ವಕ ಶುಭಕಾಮನೆಗಳು. ಒಳ್ಳೆಯತನಕ್ಕೆ ಸದಾ ಗೆಲುವು ಎನ್ನುವುದನ್ನು ಸಂಕೇತಿಸುವ ವಿಜಯದಶಮಿ, ನಾಡಿನಲ್ಲಿ ಸದಾ ಒಳಿತಾಗುವಂತೆ ಹರಸಲಿ. ಎಲ್ಲರ ನೋವು, ದುಃಖ, ಸಂಕಷ್ಟಗಳನ್ನು ಪರಿಹರಿಸಿ ಜಗನ್ಮಾತೆ ಎಲ್ಲರಿಗೂ ಭಾಗ್ಯ ಕರುಣಿಸಲಿ. ಕೊರೊನಾ ವಿರುದ್ಧದ ನಮ್ಮ ಹೋರಾಟದಲ್ಲಿ ವಿಜಯವನ್ನು ಅನುಗ್ರಹಿಸಲಿ ಎಂದು ಬಿಎಸ್​ವೈ ಟ್ವೀಟ್ ಮಾಡಿದ್ದಾರೆ.

ಧೀಮಂತ ಸಾಧಕ, ದೇಶದ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಆದರ್ಶ ನೇತಾರ, ಭಾರತದ ಮಿಸೈಲ್ ಮ್ಯಾನ್, ಮಾಜಿ ರಾಷ್ಟ್ರಪತಿ, ಭಾರತರತ್ನ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ. ಅವರ ಜೀವನ, ಸಾಧನೆ ಮತ್ತು ಚಿಂತನೆಗಳು ಸದಾ ಸ್ಫೂರ್ತಿದಾಯಕ ಎಂದು ಕಲಾಂ ಸ್ಮರಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *