ಬೆಂಗಳೂರು: ಎಲ್ಲರಿಗೂ ನೆನಪಿರಬಹುದು ಭೂಗತ ಪಾತಕಿ ಬಾಂಬೆ ರವಿ. ರಾಬರ್ಟ್ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್ ಹಾಕಿದ್ದ. ಆದ್ರೆ ಅದು ವಿಫಲವಾಗಿತ್ತು. ಇದೆಲ್ಲಾ ಮುಗಿದ ಮೇಲೆ ಬಾಂಬೆ ರವಿ ಕೊರೊನಾದಿಂದ ಇದೀಗ ಸಾವನ್ನಪ್ಪಿದ್ದಾನೆ. ಆದ್ರೆ ಸಾಯೋದಕ್ಕೂ ಮುನ್ನ ಉಮಾಪತಿ ಬಳಿ ಕ್ಷಮೆ ಕೇಳಿದ್ದಾನೆ.
ನಾನು ಯಾರ್ ಯಾರದ್ದೋ ಮಾತು ಕೇಳಿ ನಿಮ್ಗೆ ಸ್ಕೆಚ್ ಹಾಕಿದ್ದೆ. ನಮ್ಗು ನಿಮ್ಗೂ ಯಾವುದೇ ದುಷ್ಮನಿ ಇಲ್ಲ. ನನ್ನಿಂದ ನಿಮ್ನ ಫ್ಯಾಮಿಲಿ ಸಫರ್ ಆಗಿದೆ ಅಂದ್ರಿ ದಯವಿಟ್ಟು ನಿಮ್ಮೆಲ್ಲರ ಬಳಿ ನಾನು ಕ್ಷಮೆ ಕೇಳ್ತಿನಿ ಅಂದಿದ್ದಾನೆ. ಆ ಆಡಿಯೋ ಸಾಕಷ್ಟು ವೈರಲ್ ಆಗಿದೆ.
ಇನ್ನು ಈ ಬಗ್ಗೆ ನಿರ್ಮಾಪಕ ಉಮಾಪತಿ ಕೂಡ ಸ್ಪಷ್ಟನೆ ನೀಡಿದ್ದು, ಆತ ಸತ್ತಿದ್ರೆ ಆತನ ಆತ್ಮಕ್ಕೆ ಶಾಂತಿ ಸಿಗಲಿ. ಆತನಿಗೆ ಪಾಪ ಪ್ರಜ್ಞೆ ಕಾಡಿದ್ದು, ನನ್ನ ಬಳಿ ಕ್ಷಮೆ ಕೇಳಿದ್ದಾನೆ. ಇದು ಸದ್ಯಕ್ಕೆ ಪೊಲೀಸರ ಬಳಿ ಇದೆ. ನನ್ನ ಮೇಲೆ ಅದ್ಯಾರು ಸುಪಾರಿ ಕೊಟ್ಟಿದ್ರೋ ತನಿಖೆ ಬಳಿ ತಿಳಿಯಲಿದೆ ಎಂದಿದ್ದಾರೆ.