ಮುದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಬಿಜೆಪಿಯ ಕಾವ್ಯ ತಿಪ್ಪೇಸ್ವಾಮಿ ಆಯ್ಕೆ

0 Min Read

ಚಿತ್ರದುರ್ಗ: ತುರುವನೂರು ಹೋಬಳಿ ಮುದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕಾವ್ಯ ತಿಪ್ಪೇಸ್ವಾಮಿ ಹತ್ತು ಮತಗಳನ್ನು ಪಡೆದು ತಮ್ಮ ಎದುರಾಳಿ ಕಾಂಗ್ರೆಸ್‌ನ ಗಾಯಿತ್ರಮ್ಮನವರನ್ನು ಒಂದು ಮತಗಳ ಅಂತರದಿಂದ ಸೋಲಿಸಿ ಜಯಶಾಲಿಯಾಗಿದ್ದಾರೆ.

ಬಿಜೆಪಿಯ ಕಾವ್ಯ ತಿಪ್ಪೇಸ್ವಾಮಿ, ಕಾಂಗ್ರೆಸ್‌ನ ಗಾಯಿತ್ರಮ್ಮ ಇವರುಗಳು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದರು.

ಮುದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ಹತ್ತೊಂಬತ್ತು ಸದಸ್ಯರಿದ್ದು, ಕಾವ್ಯ ತಿಪ್ಪೇಸ್ವಾಮಿ ಪರ ಹತ್ತು ಮತಗಳು, ಗಾಯಿತ್ರಮ್ಮನ ಪರ ಒಂಬತ್ತು ಮತಗಳು ಚಲಾವಣೆಯಾದವು.

ಚುನಾವಣಾಧಿಕಾರಿ ಪರಮೇಶ್ವರಪ್ಪ ಕಾವ್ಯ ತಿಪ್ಪೇಸ್ವಾಮಿಯವರ ಆಯ್ಕೆಯನ್ನು ಘೋಷಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *