ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಗಳ ಬಳಿಯೇ ಇದ್ದರೆ ಅನುಕೂಲ ಹೆಚ್ಚು ಅಶ್ವಥ್ ನಾರಾಯಣ

suddionenews
1 Min Read

ಬೆಂಗಳೂರು: ಬೆಂಗಳೂರು ಉಸ್ತುವಾರಿ ಯಾರಿಗೆ ಕೊಡಬೇಕು ಎಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು. ಈ ವೇಳೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಗಳ ಬಳಿಯೇ ಇದ್ದರೆ ಅನುಕೂಲ ಹೆಚ್ಚು, ಸಧ್ಯಕ್ಕೆ ಯಾರಿಗೂ ಬೆಂಗಳೂರು ಉಸ್ತುವಾರಿ ಕೊಟ್ಟಿಲ್ಲ ಎಂದರು.

ಕೋವಿಡ್ ಹಾಗೂ ಅಮೃತ ಯೋಜನೆ ಸಂಬಂಧ ಅವರಿಗೆ ಉಸ್ತುವಾರಿ ನೀಡಲಾಗಿದೆ ಅಷ್ಟೇ,
ಸಧ್ಯಕ್ಕೆ ಮುಖ್ಯಮಂತ್ರಿಗಳೇ ಬೆಂಗಳೂರಿನ ಉಸ್ತುವಾರಿ ಸಚಿವರು ಎಂದರು.

ಮಣಿಪಾಲ್ ಆಸ್ಪತ್ರೆ ಜೊತೆ ಬಿಬಿಎಂಪಿ ಒಡಂಬಡಿಕೆ ಮಾಡಿಕೊಂಡಿದೆ. ಹೈಟೆಕ್ ಲ್ಯಾಬ್ ನಿರ್ಮಾಣ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಮಲ್ಲೇಶ್ವರಂ ಕ್ಷೇತ್ರದಲ್ಲಿ ಪ್ರಾಥಮಿಕವಾಗಿ ಲ್ಯಾಬ್ ಕಾರ್ಯರಂಭ ಮಾಡಲಾಗುತ್ತದೆ.
ಬಿಬಿಎಂಪಿ ಕಟ್ಟಡವನ್ನ ಕೊಡಲಿದೆ ಮಣಿಪಾಲ್ ಆಸ್ಪತ್ರೆಯವರು ಲ್ಯಾಬ್ ಬೇಕಾಗುವ ಎಲ್ಲಾ‌ ಸರ್ವೀಸ್ ನೀಡಲಿದ್ದಾರೆ

ಕೈಗಟ್ಟಕುವ ದರದಲ್ಲಿ ಎಲ್ಲರಿಗೂ ಲ್ಯಾಬ್ ಸರ್ವೀಸ್ ಸಿಗಲಿದೆ.
ಖಾಸಗಿ ಡೈಯಾಗ್ನಾಸ್ಟಿಕ್ ಗಳಿಗಿಂತ ಈ ಲ್ಯಾಬ್ ನಲ್ಲಿ 30 % ರಷ್ಟು ಕಡಿಮೆ ಇದರ ಇರಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರೆಫರ್ ಮಾಡಿ ಬರುವ ರೋಗಿಗಳಿಗೆ
40 % ರಿಯಾಯಿತಿ ದರದಲ್ಲಿ ಇರಲಿದೆ. ಬಿಪಿಎಲ್ ಕಾರ್ಡ್ ದಾರರಿಗೆ 50% ರಿಯಾಯಿತಿ ಇರಲಿದೆ. ಇನ್ನೂ ಪ್ರಾಥಮಿಕವಾಗಿ ಮಲ್ಲೇಶ್ವರಂ ಕ್ಷೇತ್ರದದಲ್ಲಿ ಆರಂಭ ಮಾಡಲಾಗುತ್ತೆದೆ. ಮುಂದಿನ ದಿನಗಳಲ್ಲಿ ಬೇರೆ ಕ್ಷೇತ್ರಗಳಲ್ಲೂ ಮಾಡುವ ಸಂಬಂಧ ಚಿಂತನೆ ಇದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *