ಬೆಂಗಳೂರು: ಮನೆ ವಿಚಾರಕ್ಕೆ ಸಭಾಪತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಳು ಬಾರಿ ಪತ್ರ ಬರೆದಿದ್ದೇನೆ, ಇದು ಎಂಟನೇ ಬಾರಿ ಆದ್ರೂ ಕೂಡ ರಾಜ್ಯ ಸರ್ಕಾರ ಅಧಿಕೃತ ನಿವಾಸ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರ ಬರೆದರು ಸ್ಪಂದನೆ ಸಿಕ್ತಾ ಇಲ್ಲ. ಇನ್ನೇನಿದ್ರೂ ಭಿಕ್ಷೆ ಬೇಡಬೇಕಷ್ಟೇ. ನಾನು ಮಾತ್ರ ಅಲ್ಲ, ವಿಧಾನಸಭೆ ಸ್ಪೀಕರ್ ಕಾಗೇರಿ ಸೇರಿದಂತೆ ಹಲವರು ಮನವಿ ನಾಡಿದ್ದಾರೆ. ಅಧಿಕೃತ ನಿವಾಸ ನೀಡುವಂತೆ. ಆದ್ರೆ ಯಾವುದಕ್ಕೆ ಪ್ರತಿಕ್ರಿಯೆ ಸಿಕ್ತಾಯಿಲ್ಲ.
ಎಲ್ಲರಿಗೂ ನಿವಾಸ ಇದೆ. ನಮ್ಮ ಹಣೆಬರಹ ನೋಡಿ. ಕಾವೇರಿ ನಿವಾಸ ನಿಗದಿತ ನಿವಾಸ ಅಲ್ಲ. ಆದ್ರೂ ಅಲ್ಲಿ ಸಿಎಂ ಇರ್ತಾರೆ. ಪ್ರೋಟೋಕಾಲ್ ಪ್ರಕಾರ ಸಿಎಂಗಿಂತ ಮೇಲಿನವರು ನಾವೂ. ಆದ್ರೆ ನಮ್ಗೆ ಅಧಿಕೃತವಾಗಿ ಒಂದು ನಿವಾಸವಿಲ್ಲ. ನಮಗೆ ಶಕ್ತಿ ಇಲ್ಲ ಅಂದುಕೊಂಡು ಬಿಟ್ಟಿದ್ದಾರೆ. ಇನ್ನಜ ಏರ್ಪೋರ್ಟ್ ನಲ್ಲೂ ಅಷ್ಟೇ ಸಿಎಂ ಹಾಗೂ ಗೃಹ ಸಚಿವರು ನೇರವಾಗಿಯೇ ಹೋಗ್ತಾರೆ. ಆದ್ರೆ ನಮಗೆ ಬುಕ್ಕಿಂಗ್ ವ್ಯವಸ್ಥೆ ಇದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.