ಬಾಂಗ್ಲಾದೇಶ vs ಭಾರತ :  ನಿರ್ಣಾಯಕ ಪಂದ್ಯ ; ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ…!

ಸಾಧಾರಣವಾಗಿ ಬಾಂಗ್ಲಾದೇಶದ ಜೊತೆ ಭಾರತ ಪಂದ್ಯ ಎಂದರೆ ಯಾವುದೇ ಆತಂಕವಿಲ್ಲದೇ  ಗೆಲ್ಲುತ್ತೇವೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ ಜೊತೆಗಿನ ಪಂದ್ಯಗಳೂ ಕುತೂಹಲ ಮೂಡಿಸುತ್ತಿವೆ.

ಅಂತಿಮ ಫಲಿತಾಂಶ ಟೀಂ ಇಂಡಿಯಾ ಪರವಾಗಿದ್ದರೂ, ಬಾಂಗ್ಲಾ ಪಂದ್ಯದ ವಿವಿಧ ಹಂತಗಳಲ್ಲಿ ಅನಿರೀಕ್ಷಿತವಾಗಿ ಅಬ್ಬರಿಸಿ ನಮ್ಮ ತಂಡವನ್ನು ಸಂಕಷ್ಟಕ್ಕೀಡು ಮಾಡಬಹುದು. ಈ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ನಲ್ಲಿ ಇಂದು ಉಭಯ ತಂಡಗಳ ನಡುವೆ ಮತ್ತೊಂದು ಮಹತ್ವದ ಕದನಕ್ಕೆ ವೇದಿಕೆ ಸಜ್ಜಾಗಿದೆ.

ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೆಮಿಸ್ ತಲುಪುವುದು ಬಹುತೇಕ ಖಚಿತವಾಗಿದ್ದು, ಚಿಕ್ಕ ತಂಡಗಳ ವಿರುದ್ಧ ಎರಡು ಗೆಲುವು ಸಾಧಿಸಿರುವ ಬಾಂಗ್ಲಾದೇಶ ಭಾರತದ ವಿರುದ್ಧದ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.

ಪಂತ್ ಗೆ ಅವಕಾಶ!
ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಕೊಹ್ಲಿ ಮತ್ತು ಸೂರ್ಯಕುಮಾರ್ ಎರಡು ಅದ್ಭುತ ಇನ್ನಿಂಗ್ಸ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ರೋಹಿತ್ ನೆದರ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಆದರೆ ಕೆಎಲ್ ರಾಹುಲ್ ಟೂರ್ನಿಯಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.  ಸತತ ಮೂರು ಪಂದ್ಯಗಳಲ್ಲಿ 4, 9, 9 ರನ್ ಗಳಿಸಿದರು. ಆದರೆ, ರಾಹುಲ್ ಅವರ ಕ್ಷಮತೆ ನಮಗೆ ತಿಳಿದಿದೆ ಮತ್ತು ಅವರನ್ನು ತಂಡದಿಂದ ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ.

ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ  ಗಾಯದ ತೊಂದರೆ ಇದ್ದರೂ ಇನ್ನೂ ಅವರ ಆಟದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾರ್ತಿಕ್ ಗೆ ಆಡುವ ಬದಲು ಅವಕಾಶಕ್ಕಾಗಿ ಕಾಯುತ್ತಿರುವ ಪಂತ್ ಗೆ ಅವಕಾಶ ನೀಡುವುದು ಸರಿಯಾದ ನಿರ್ಧಾರ ಎನ್ನಬಹುದು.  ಬೌಲಿಂಗ್ ನಲ್ಲಿ ಮೂವರು ಸಾಮಾನ್ಯ ವೇಗಿಗಳೊಂದಿಗೆ ಅಶ್ವಿನ್ ಸ್ಪಿನ್ನರ್ ಆಗಿ ಮುಂದುವರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಬಂಗ್ಲಾದೇಶದ ಆಟಗಾರರಲ್ಲಿ ಸಾಲಿನಲ್ಲಿ ನಾಲ್ಕು ಎಡಗೈ ಬ್ಯಾಟ್ಸ್‌ಮನ್‌ಗಳಿದ್ದು, ಅಶ್ವಿನ್ ಅವರೇ ಸೂಕ್ತ.

ಬೌಲಿಂಗ್ ಮೇಲೆ ಭರವಸೆ…
ಲೀಗ್ ಹಂತದಲ್ಲಿ ಬಾಂಗ್ಲಾದೇಶ ತಂಡ ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ವಿರುದ್ಧ ಅಲ್ಪ ಅಂತರದಿಂದ ಗೆದ್ದಿದ್ದು, ಉತ್ತಮ ಬೌಲಿಂಗ್ ನಿಂದಾಗಿ ಆ ಎರಡು ಗೆಲುವುಗಳು ಬಂದಿವೆ. ಅದರಲ್ಲೂ ವೇಗಿ ತಸ್ಕೀನ್ ಅಹ್ಮದ್ ತಂಡದ ಹೊಣೆ ಹೊತ್ತಿದ್ದಾರೆ.  ಮುಸ್ತಾಫಿಜುರ್ ಫಾರ್ಮ್‌ಗೆ ಮರಳಿರುವುದು ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಹಸನ್ ಮಹಮೂದ್ ಕೂಡ ಪ್ರಮುಖ ವೇಗಿ. ಆಫ್ಸ್ಪಿನ್ನರ್ ಮೊಸಾದಿಕ್ ಕೂಡ ಪ್ರಭಾವ ಬೀರಬಹುದು. ಆದರೆ ಅವರೆಲ್ಲರಿಗೂ ಬಲಿಷ್ಠ ಭಾರತೀಯ ತಂಡದ ಆಟಗಾರರ ಬ್ಯಾಟಿಂಗ್‌ನ್ನು ನಿಯಂತ್ರಿಸುವುದು ಸುಲಭವಲ್ಲ.  ಬ್ಯಾಟಿಂಗ್‌ನಲ್ಲಿ ತಂಡ ದುರ್ಬಲವಾಗಿದೆ. ನಜ್ಮುಲ್, ಲಿಟನ್, ಸರ್ಕಾರ್ ಮತ್ತು ಅಫೀಫ್ ಅವರ ಪ್ರದರ್ಶನದ ಮೇಲೆ ತಂಡದ ಅವಕಾಶಗಳು ಅವಲಂಬಿತವಾಗಿವೆ.  ಎಲ್ಲಕ್ಕಿಂತ ಮಿಗಿಲಾಗಿ ನಾಯಕ ಶಕೀಬ್ ಫಾರ್ಮ್ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಮೇಲಾಗಿ ‘ನಾವು ವಿಶ್ವಕಪ್ ಗೆಲ್ಲಲು ಬಂದಿಲ್ಲ’ ಎಂಬ ಅವರ ಹೇಳಿಕೆ ತಂಡದ ಆತ್ಮಸ್ಥೈರ್ಯಕ್ಕೆ ಧಕ್ಕೆ ತರಲಿದೆ.

ಪಿಚ್ ಮತ್ತು ವಾತಾವರಣ
ಅಡಿಲೇಡ್ ಓವಲ್‌ನಲ್ಲಿ ಬೆಳಿಗ್ಗೆಯಿಂದ ಮಳೆಯಾಗುತ್ತಿಲ್ಲ ಮತ್ತು ಹವಾಮಾನವು ಗಣನೀಯವಾಗಿ ಸುಧಾರಿಸಿದೆ. ತುಂಬಾ ಚಳಿ ಇದೆ.ಆದರೆ ಇಂದಿನ ಹವಾಮಾನ ಮುನ್ಸೂಚನೆಯು ‘ಮಳೆ ಇಲ್ಲ’ ಎಂದು ತಿಳಿಸಿದೆ. ಅಡಿಲೇಡ್ ಓವಲ್ ಮೈದಾನವು  ಬ್ಯಾಟಿಂಗ್ ಪಿಚ್ ಇದಾಗಿದ್ದು, ದೊಡ್ಡ ಮೊತ್ತದ ರನ್ ಗಳಿಸಲು ಸಾಧ್ಯ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು.

ಟಿ20ಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ 11 ಪಂದ್ಯಗಳು ನಡೆದಿದ್ದು, 10ರಲ್ಲಿ ಭಾರತ ಗೆದ್ದಿದೆ. ಉಭಯ ತಂಡಗಳು 2016ರಲ್ಲಿ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಅಂದು ನಡೆದ ಅದ್ಭುತ ಪಂದ್ಯದಲ್ಲಿ ಭಾರತ ಒಂದು ರನ್ ಅಂತರದಿಂದ ಗೆದ್ದಿತ್ತು. 5 ಎಸೆತಗಳಲ್ಲಿ 10 ರನ್ ಗಳಿಸಬೇಕಿದ್ದ ಬಾಂಗ್ಲಾದೇಶ ಸತತ 2 ಬೌಂಡರಿ ಬಾರಿಸಿ ಭಾರತ ಮುಂದಿನ 3 ಎಸೆತಗಳಲ್ಲಿ ಒಂದೂ ರನ್ ನೀಡದೆ 3 ವಿಕೆಟ್ ಕಬಳಿಸಿದ್ದನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ.

ಇಂದಿನ ಪಂದ್ಯದ ವಿಜೇತರು ಈ ವಿಶ್ವಕಪ್‌ನ ಸೆಮಿಫೈನಲ್ ರೇಸ್‌ನಲ್ಲಿ ಸ್ಥಾನ ಪಡೆಯುತ್ತಾರೆ. ಸೋತವರು ವಿಶ್ವ ಕಪ್ ನಿಂದ ನಿರ್ಗಮಿಸುವ ಸಾಧ್ಯತೆಯಿದೆ.
ಆದ್ದರಿಂದ ಇಂದಿನ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕ.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

1 hour ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

5 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago