ನಿನ್ನೆ ರಾತ್ರಿ ನಡೆದ ರೈಲು ದುರಂತ ಎಲ್ಲರನ್ನು ಶಾಕ್ ಗೆ ಒಳಗಾಗಿಸಿದೆ. ದೇಶದಲ್ಲಿಯೇ ಇಂಥ ಘೋರ ರೈಲು ದುರಂತ ಇದೆ ಮೊದಲಾಗಿದೆ. ಎರಡು ಪ್ಯಾಸೆಂಜರ್ ಮತ್ತು ಒಂದು ಗೂಡ್ಸ್ ರೈಲು ಡಿಕ್ಕಿಯಾದ ಪರಿಣಾಮ ಬರೋಬ್ಬರಿ 233 ಜನ ಅಸುನೀಗಿದ್ದಾರೆ. 900 ಮಂದಿ ಗಾಯಗೊಂಡಿದ್ದಾರೆ. ಇನ್ನು ಕೂಡ ಜನರ ನರಳಾಟ ಜಾಸ್ತಿಯಾಗಿಯೇ ಇದೆ.
ಗಾಯಗೊಂಡವರಿಗೆ ಅಲ್ಲಿನ ಸ್ಥಳೀಯರೇ ರಕ್ತದಾನ ಮಾಡಿ ಕಾಪಾಡಿದ್ದಾರೆ. ಶಾಲಿಮಾರ್ – ಚೆನ್ನೈ ಕೊರೋಮಂಡಲ್ ಟ್ರೈನ್ ಮುಖಾಮುಖಿಯಾಗಿ ಈ ದುರ್ಘಟನೆ ಸಂಭವಿಸಿದೆ. ಟ್ರೈನ್ ಚಲಿಸುತ್ತಿದ್ದ ಬೋಗಿ ಬಿಟ್ಟು ಮತ್ತೊಂದು ಬೋಗಿಗೆ ಹೋಗಿ ಬಿದ್ದಿದ್ದವು. 10-12 ಕೋಚ್ ಗಳು ಹಳಿ ತಪ್ಪಿದ್ದವು. ಇದೆ ವೇಳೆ ಅದೇ ಟ್ರ್ಯಾಕ್ ನಲ್ಲಿ ಬೆಂಗಳೂರು – ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಬಂದು ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ಹೊಡೆದಿದೆ. ಇದರಿಂದ ಗೂಡ್ಸ್ ರೈಲು ಕೂಡ ಅಪಘಾತಕ್ಕೀಡಾಗಿದೆ.
NDRF ನ ಮೂರು ತಂಡಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿವೆ. ಅಷ್ಟೇ ಅಲ್ಲ ಒರಿಸ್ಸಾದ ಡಿಸಾಸ್ಟರ್ ರ್ಯಾಪಿಡ್ ಆಕ್ಷನ್ ಫೋರ್ಸ್ ತಂಡ ಕೂಡ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಒಡಿಶಾದ ಜನ ಸಹಾಯಕ್ಕೆ ಧಾವಿಸಿದ್ದಾರೆ. ರಕ್ತದಾನ ಮಾಡಲು ಮುಂದಾಗಿದ್ದಾರೆ. ಸ್ಥಳೀಯರ ಮಾನವೀಯತೆ ಕಂಡು ಅಲ್ಲಿನ ವೈದ್ಯರು ಧನ್ಯವಾದ ತಿಳಿಸಿದ್ದಾರೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಬ್ಯಾಟ್ನಿಂದ ರನ್ಗಳನ್ನು ನಿರೀಕ್ಷಿಸುತ್ತಾರೆ.…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ಮಕ್ಕಳ ಅರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿ ಜಂಕ್ ಪುಡ್ ಕಡೆಗೆ ಅವರ…