ದಾವಣಗೆರೆ ಅಡಿಕೆ ಬೆಳೆಗಾರರಲ್ಲಿ ಸಂತಸ : ಏರಿದ ದರ, ಎಷ್ಟಿದೆ ಇಂದು..?

ದಾವಣಗೆರೆ ; ಬೇಸಿಗೆ ಹೆಚ್ಚಾಗಿದೆ. ಈ ಬೇಸಿಗೆಯಲ್ಲಿ ಅಡಿಕೆ ಗಿಡಗಳನ್ನ ಆರೋಗ್ಯವಾಗಿ ಇರುವಂತೆ ಕಾಪಾಡಿಕೊಳ್ಳುವುದೇ ಸಾಹಸದ ಕೆಲಸವಾಗಿರುತ್ತದೆ. ನೀರನ್ನ ಒದಗಿಸಿ, ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕಾಗುತ್ತದೆ. ಇಂಥಹ ಸಮಯದಲ್ಲಿ ಅಡಿಕೆಯ ಬೆಲೆ ಏನಾದರೂ ಕಡಿಮೆಯಾಗಿ ಬಿಟ್ಟರೆ ರೈತರ ಬೇಸರವಂತು ಹೆಚ್ಚಾಗುತ್ತದೆ. ಇಂದು ದಾವಣಗೆರೆ ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆಯಾಗಿದೆ. ಗರಿಷ್ಠ ಬೆಲೆ 52,300 ರೂಪಾಯಿ ಆಗಿದೆ. ಹಾಗಾದ್ರೆ ಎಷ್ಟಕ್ಕೆ ಹೋಯ್ತು ಅನ್ನೋದರ ಮಾಹಿತಿ ಇಲ್ಲಿದೆ.

ಚನ್ನಗಿರಿ ರಾಶಿ ಅಡಿಕೆಯೂ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ ಬೆಲೆ 52,300, ಕನಿಷ್ಠ ಬೆಲೆ 32,012, ಹಾಗೇ ಸರಾಸರಿ ಬೆಲೆ 49,669
ಬೆಟ್ಟೆ ಅಡಿಕೆ ದರ ಗರಿಷ್ಠ ಬೆಲೆ 25,287, ಕನಿಷ್ಠ ಬೆಲೆ 23,786, ಸರಾಸರಿ ಬೆಲೆ 24,536 ಇದೆ. ಸದ್ಯ ಅಡಿಕೆಯ ದರ ಏರಿಕೆಯಾಗುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ. ಜನವರಿ ಕೊನೆಯಲ್ಲಂತು 52 ಸಾವಿರಕ್ಕೆ ಬಂದು ನಿಂತಿತ್ತು. ಇನ್ನೆಲ್ಲಿ ಅಡಿಕೆ ಹೀಗೆ ಕಡಿಮೆಯಾಗಿ ಬಿಡುತ್ತದೋ ಎಂಬ ಆತಂಕ ರೈತರನ್ನು ಕಾಡಿತ್ತು. ಸದ್ಯ ಅಡಿಕೆಯ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಈ ಮೂಲಕ ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ರೂಪಾಯಿ ಗಡಿ ದಾಟಿತ್ತು. ಆದ್ರೆ ಕಳೆದ ವರ್ಷವೇ 55 ಸಾವಿರದ ತನಕ ಅಡಿಕೆ ಬೆಲೆ ರೀಚ್ ಆಗಿತ್ತು. 2023ರ ಜುಲೈನಲ್ಲಿ ಗರಿಷ್ಠ ಬೆಲೆ 57 ಸಾವಿರ ಗಡಿ ದಾಟಿತ್ತು. 2024ರ ಮೇ ತಿಂಗಳಲ್ಲಿ 55 ಸಾವಿರದ ಗಡಿ ದಾಟಿತ್ತು. ಮತ್ತೆ ಆ ದಿನಗಳು ಬರುತ್ತವೆ ಎಂಬ ನಿರೀಕ್ಷೆ ಎಲ್ಲಾ ರೈತರಿಗೂ ಇದೆ. ಹೀಗಾಗಿಯೇ ಅಡಿಕೆಯ ಫಸಲನ್ನ ಗಮನವಿಟ್ಟು, ಕಾಳಜಿಯಿಂದ ಕಾಪಾಡಿಕೊಳ್ಳುತ್ತಿದ್ದಾರೆ.

suddionenews

Recent Posts

ಪ್ರತಿದಿನ 30 ನಿಮಿಷಗಳ ಕಾಲ ವಾಕ್ ಮಾಡಿದರೆ ಎಷ್ಟೊಂದು ಆರೋಗ್ಯ ಪ್ರಯೋಜನಗಳು ಗೊತ್ತಾ ?

ಸುದ್ದಿಒನ್ : ವಾಕಿಂಗ್ ಮಾಡುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಪ್ರತಿದಿನ 30 ನಿಮಿಷಗಳ ವಾಕ್ ಆರೋಗ್ಯಕ್ಕೆ ಎಷ್ಟು…

7 minutes ago

ಈ ರಾಶಿಯವರು ಹೊಸದಾಗಿ ವ್ಯಾಪಾರ ಪ್ರಾರಂಭ ಮಾಡಿದ್ದಾರೆ ಕೈಹಿಡಿದರೆ ಸಾಕು

ಈ ರಾಶಿಯವರು ಹೊಸದಾಗಿ ವ್ಯಾಪಾರ ಪ್ರಾರಂಭ ಮಾಡಿದ್ದಾರೆ ಕೈಹಿಡಿದರೆ ಸಾಕು, ಈ ರಾಶಿಯವರು ಮದುವೆಯಾಗಿ ತಿಂಗಳಾಯಿತು ಕಲಹಗಳು ಶುರು, ಮಂಗಳವಾರದ…

3 hours ago

ಹುಬ್ಬಳ್ಳಿಯಲ್ಲಿ ಕಣ್ಣೀರುಡುತ್ತಾ ಜೈನ ಮುನಿ ಸರ್ಕಾರಕ್ಕೆ ಹೇಳಿದ್ದೇನು..?

ಹುಬ್ಬಳ್ಳಿ; ಜೈನ ಸಮುದಾಯದವರು ಸರ್ಕಾರಕ್ಕೆ ಒಂದಷ್ಟು ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಅದರಲ್ಲೂ ಜೈನ ನಿಗಮ ಸ್ಥಾಪನೆ ಮಾಡುವ ಬಗ್ಗೆ ಹೆಚ್ಚು ಒತ್ತು…

12 hours ago

ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಅಶ್ವಿನಿ ಅವರಿಂದ ವಿಶೇಷ ಕಾರ್ಯಕ್ಕೆ ಚಾಲನೆ

ಬೆಂಗಳೂರು; ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟುಹಬ್ಬ. ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೆಲ್ಲಾ ಸಮಾಧಿ ಬಳಿ ಹೋಗಿ…

13 hours ago

ಲಸಿಕೆಗಳು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸುತ್ತವೆ : ಎನ್.ಎಸ್.ಮಂಜುನಾಥ

  ಚಿತ್ರದುರ್ಗ. ಮಾರ್ಚ್17: ಲಸಿಕೆಗಳು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸುತ್ತವೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು. ನಗರದ…

14 hours ago

ಅಗ್ನವೀರ್ ನೇಮಕಾತಿ ಅರ್ಜಿ ಆಹ್ವಾನ

ಚಿತ್ರದುರ್ಗ.ಮಾರ್ಚ್.17:ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ…

14 hours ago