ಅಪ್ಪು, ಶಿವಣ್ಣ ಯಾವತ್ತಾದ್ರೂ ಜಗಳ ಆಡಿದ್ರಾ..? ಅಭಿಮಾನಿಗಳ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಏನಂದ್ರು..?

suddionenews
1 Min Read
  1. ಮೈಸೂರು: ಅಣ್ಣ ತಮ್ಮಂದಿರು ಅಂದ್ರೆ ಅಲ್ಲಿ ಕೊಂಚ ಜಗಳ ಇರಲೇಬೇಕು. ಯಾವುದಾದರೂ ಸಣ್ಣ ವಿಚಾರಕ್ಕಾದರೂ ಜಗಳ, ಮನಸ್ತಾಪ ಆಗಿಯೇ ಇರುತ್ತೆ. ಆದ್ರೆ ಅಣ್ಣಾವ್ರ ಮಕ್ಕಳಲ್ಲಿ ಅದು ತದ್ವಿರುದ್ಧ. ಅಣ್ಣ ತಮ್ಮಂದಿರ ನಡುವೆ ಜಗಳವೇ ಆಗಿಲ್ಲವಂತೆ.‌ಈ ಬಗ್ಗೆ ಶಿವಣ್ಣ ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.

ಇಂದು ಜಿಲ್ಲೆಯಲ್ಲಿರುವ ಶಕ್ತಿಧಾಮ ಆಶ್ರಮಕ್ಕೆ ಭೇಟಿ ನೀಡಿದ್ದರು. ಮಕ್ಕಳನ್ನ ನೋಡಿ, ಮಾತಾಡಿಸಿ, ವಿಚಾರಿಸಿಕೊಂಡು ಬಂದಿದ್ದಾರೆ. ಅಪ್ಪು ಆಶ್ರಮದ ಅನ್ನದಾತರಾಗಿದ್ದವರು. ಅವರೇ ಇಷ್ಟು ಮಕ್ಕಳನ್ನ ವಿಧ್ಯಾಭ್ಯಾಸದಿಂದ ಹಿಡಿದು ಎಲ್ಲಾ ಜವಬ್ದಾರಿಗಳನ್ನ ತೆಗೆದುಕೊಂಡಿದ್ದರು. ಹೀಗಾಗಿ ಅಪ್ಪು ಇಲ್ಲದ ಈ ಘಳಿಗೆಯಲ್ಲಿ ಶಕ್ತಿಧಾಮದ ಮಕ್ಕಳಿಗೆ ಶಿವಣ್ಣ ಅವರೇ ಧೈರ್ಯ ತುಂಬಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ಅಪ್ಪು ಅವರನ್ನ ನೆನೆದಿದ್ದಾರೆ. ಶಕ್ತಿಧಾಮ ಆಶ್ರಮವನ್ನ ಇನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಶಕ್ತಿಧಾಮ ಶಾಲೆ ನಿರ್ಮಾಣದ ಬಗ್ಗೆ ಇನ್ನು ಎರಡು ಮೂರು ವಾರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಪ್ಪುನನ್ನು ಜೀವಂತವಾಗಿಡಲು ಪ್ರಯತ್ನಿಸುತ್ತೇವೆ. ಅಳುವುದರಿಂದ ಅದು ಸಾಧ್ಯವಿಲ್ಲ. ಅಪ್ಪು ನಾನು ಯಾವತ್ತಿಗೂ ಜಗಳವಾಡಿಲ್ಲ. ತಾಯಾಣೆ ನಾನು ಅಪ್ಪು ಜಗಳವಾಡಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *