ಮತ್ತೊಂದು ವಿಷಾಹಾರದ ಸೇವಿಸಿದ ಘಟನೆ : ಚಾಮರಾಜನಗರದಲ್ಲಿ 60 ಮಕ್ಕಳು ಅಸ್ವಸ್ಥ..!

suddionenews
1 Min Read

ಚಾಮರಾಜನಗರ: ಇತ್ತೀಚೆಗೆ ಮಕ್ಕಳು ವಿಷಾಹಾರ ಸೇವಿಸುತ್ತಿರುವ ಘಟನೆ ಸಾಕಷ್ಟು ವರದಿಯಾಗುತ್ತಿದೆ. ಇದೀಗ ಚಾಮರಾಜನಗರದಲ್ಲಿ ವಿಷಾಹಾರ ಸೇವಿಸಿ ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಜಿಲ್ಲೆಯ ಹನೂರು ತಾಲೂಕಿನ ವಡಕೇಹಳ್ಳ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನದ ಬಿಸಿಯೂಟದ ಸಾಂಬಾರ್ ನಲ್ಲಿ ಹಲ್ಲಿ ಬಿದ್ದಿದ್ದು, ಅದನ್ನ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಸುಮಾರು 60 ಕ್ಕೂ ಹೆಚ್ಚು ಮಕ್ಕಳು ಈ ಊಟ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.

ಊಟ ಹಾಕಿಸಿಕೊಳ್ಳುವಾಗ ವಿದ್ಯಾರ್ಥಿ ಯ ತಟ್ಟೆಗೆ ಸತ್ತ ಹಲ್ಲಿಯೂ ಬಿದ್ದಿದೆ. ಇದನ್ನ ಶಿಕ್ಷಕರಿಗೆ ತಿಳಿಸಲಾಗಿದೆ. ತಕ್ಷಣ ಶಿಕ್ಷಕರು ಊಟ ಮಾಡುವುದನ್ನ ನಿಲ್ಲಿಸಲು ಮಕ್ಕಳಿಗೆ ತಿಳಿಸಿದ್ದಾರೆ. ಆದ್ರೆ ಅದಾಗಲೇ ಸಾಕಷ್ಟು ಮಕ್ಕಳು ಊಟ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದರು. ಸದ್ಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ‌. ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಇಂಥ ಘಟನೆ ಆಗಾಗ ಮರುಕಳುಹಿಸುತ್ತಲೆ ಇದೆ‌. ಸೋ ಬಿಸಿಯೂಟ ತಯಾರಿಸುವಾಗ ಅಡುಗೆ ಮನೆ ಕಡೆ ಹಾಗೂ ಅಡುಗೆ ಮಾಡುವಾಗ ಎಚ್ಚರದಿಂದಿರುವುದು ತುಂಬಾ ಒಳ್ಳೆಯದು.

Share This Article
Leave a Comment

Leave a Reply

Your email address will not be published. Required fields are marked *